ಯರಗಟ್ಟಿ : ಸಮುದಾಯ ಭವನಗಳು ಸಾಮಾಜಿಕ ಸಂಘಟನೆ, ಸಮಾಜದ ಏಳಿಗೆಗಾಗಿ ಬಳಕೆಯಾಗಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಸಮೀಪದ ಜೀವಾಪೂರ ಗ್ರಾಮದಲ್ಲಿ ಈಚಗೆ ಹಮ್ಮಿಕೊಂಡಿದ್ದ ಪಂಚಾಯತ್ ರಾಜ ಇಂಜನಿಯರಿಂಗ ಇಲಾಖೆ ಉಪ ವಿಭಾಗ ಸವದತ್ತಿ ೨೦೨೫. ೨೬ನೇ ಸಾಲಿನ ಶಾಸಕರ ಅನುದಾನದಡಿ ಶ್ರೀ ಬಸವೇಶ್ವರ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಯುವ ಮಿತ್ರರು ಸಮಾಜದ ಅಬಿವೃದ್ಧಿಗೆ ಪೂರ್ವಕವಾದ ಕರ್ಯ ಚಟುವಟಿಕೆಗಳನ್ನು ಮಾಡಬೇಕು. ವಿಶ್ವಕ್ಕೆ ಬುಧ್ಧ, ಬಸವ, ಅಂಬೇಡ್ಕರ ಅವರ ಕೊಡುಗೆ ಅಪಾರವಾಗಿದ್ದು, ಅವರ ತತ್ವಾದರ್ಶಗಳನ್ನು ಪಾಲನೆ ಮಾಡಬೇಕು ಎಂದರು.ಕಾಂಗ್ರೆಸ ಮುಖಂಡ ವೆಂಕಣ್ಣ ಯರಡ್ಡಿ, ಮಾತನಾಡಿ, ಗ್ರಾಮಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅತಿ ಮುಖ್ಯವಾಗಿದೆ ಎಂದು ಹೇಳಿದರು.
ಮುನವಳ್ಳಿ ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ, ಶಂಕರಯ್ಯ ಹಿರೇಮಠ, ಮುಖಂಡ ಕಲ್ಮೇಶ ಬಾಲರಡ್ಡಿ, ಮುತ್ತನಗೌಡ ನಾಯ್ಕರ, ಗೌಡಪ್ಪ ನಾಯ್ಕರ, ಸದಾಶಿವ ಗೋಪಾಳಿ, ಪುಟ್ಟು ಅರಳಿಕಟ್ಟಿ, ಕೃಷ್ಣ ಅರೆಬೆಂಚಿ, ಸುರೇಶ ಅರಳಿಕಟ್ಟಿ, ಬಸವರಾಜ ಗಿರೆಡ್ಡಿ, ಗಿರೀಶ ಯರಡ್ಡಿ, ಬಸಪ್ಪ ಕಮಕೇರಿ, ಕೃಷ್ಣ ಚೌರಡ್ಡಿ, ಶೇಟ್ಟೆಪ್ಪ ಮಾದರ, ಬಸವರಾಜ ತಳವಾರ, ರಮೇಶ ನರಿ, ಪ್ರವೀಣ ಯರಡ್ಡಿ, ಹನಮಂತ ರಂಗನ್ನವರ, ರಮೇಶ ಅರಳಿಕಟ್ಟಿ, ಸಚೀನ ಅಳಗೋಡಿ, ಯಂಕಣ್ಣಾ ಕಳ್ಳಿಗುದ್ದಿ ಸೇರಿದಂತೆ ಕಾರ್ಯಕರ್ತರು ಇದ್ದರು.
