ನೇಗಿನಹಾಳ: ರೈತರು ತಮಗೆ ಹಿಂಗಾರು ಬೆಳೆಗೆ ಬೇಕಾದ ಸಬ್ಸಿಡಿ ದರದಲ್ಲಿ ಬೀಜಗಳನ್ನು ಸ್ಥಳೀಯ ಪಿ ಕೆ ಪಿ ಎಸ್ ಗಳಲ್ಲಿ ಪಡೆದು ಬಿತ್ತನೆ ಮಾಡಿರಿ ಮತ್ತು ಒಳ್ಳೆಯ ಮಳೆ ಅಗಿದ್ದು ಇದರ ಸದುಪಯೋಗ ರೈತರು ಪಡೆಯಬೇಕೆಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಹೇಳಿದರು.
ಅವರು ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ರೈತರಿಗೆ ಕಡಲೆ ಬೀಜ ವಿತರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪಿ ಕೆ ಪಿ ಎಸ್ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಗ್ರಾಮದ ಮುಖಂಡರು, ರೈತರು ಭಾಗವಹಿಸಿದ್ದರು.