ಬಳ್ಳಾರಿ. ಸೆ. 24 : ನಗರದ ಸೀತಾರಾಮ ಆಶ್ರಮದಲ್ಲಿ ಶರಣವ ರಾತ್ರಿ ಪ್ರಯುಕ್ತ ಮೂರನೇ ದಿನವಾದ ಇಂದು ಬುಧವಾರ
ಇಂದಿನ ಅಲಂಕಾರ ಲಲಿತಾದೇವಿಗೆ,
ನವದುರ್ಗೆಯರಲ್ಲಿ ಚಂದ್ರಘಂಟಾ ಗೆ,
ದಶಮಹಾ ವಿದ್ಯೆಗಳಲ್ಲಿ ತ್ರಿಪುರ ಭೈರವಿದೇವಿ ಗೆ ಹಾಗೆಯೇ ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ತ್ರಿಶಕ್ತಿ ರೂಪಗಳಿಗೆ ಕುಂಕುಮಾರ್ಚನೆ ಸಹಸ್ರನಾಮ ವಿಶೇಷ ಪೂಜೆಗಳನ್ನು ನಡೆಸಲಾಯಿತು.
ಹೀಗೆ ಪ್ರತಿ ದಿನಕ್ಕೊಂದರಂತೆ ವಿಶೇಷ ಅಲಂಕಾರಗಳೊಂದಿಗೆ ವಿಜಯ ದಶಮಿ ಗುರುವಾರದ ವರೆಗೆ ವಿಶೇಷ ಪೂಜೆಗಳು ನಡೆಯುತ್ತವೆ.
ಆದ್ದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸೀತಾರಾಮ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಸೀತಾರಾಮ ಆಶ್ರಮಮ್ ಟ್ರಸ್ಟ್ ನ ಪದಾಧಿಕಾರಿಗಳು, ಭಕ್ತರಲ್ಲಿ ಮನವಿ ಮಾಡಿದ್ದಾರೆ.


