ಅರುಣಾಚಲಪ್ರದೇಶ, ಸೆಪ್ಟೆಂಬರ್ 22: ಪ್ರಧಾನಿ ನರೇಂದ್ರ ಮೋದಿ ಇಂದು ಅರುಣಾಚಲದಲ್ಲಿ ಜಿಎಸ್ಟಿ ಉಳಿತಾಯ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ವ್ಯಾಪಾರಿಗಳ ಬಳಿ ತೆರಳಿ ಮೋದಿ ಮಾತನಾಡಿ, ಇದು ಸ್ವದೇಶಿ ಉತ್ಪನ್ನಗಳೆಂದು ಗರ್ವದಿಂದ ಹೇಳಿ ಎಂದು ಹೇಳಿದ್ದಾರೆ. ಸ್ವದೇಶಿ ಉತ್ಪನ್ನಗಳೆಂದು ಗರ್ವದಿಂದ ಹೇಳಿ ಎಂದು ಬರೆದಿರುವ ಕಾರ್ಡನ್ನು ಪ್ರತಿ ಶಾಪ್ಗೆ ನೀಡಿದ್ದಾರೆ. ಇದನ್ನು ತಮ್ಮ ಅಂಗಡಿಗಳಲ್ಲಿ ಇರಿಸುವುದಾಗಿ ವ್ಯಾಪಾರಿಗಳು ಖುಷಿಯಿಂದ ಹೇಳಿದ್ದಾರೆ. ಪ್ರಧಾನಿ ಮೋದಿ ಸ್ಥಳೀಯ ತೆರಿಗೆದಾರರು, ವ್ಯಾಪಾರಿಗಳು ಹಾಗೂ ಕೈಗಾರಿಕೋದ್ಯಮಿಗಳನ್ನು ಭೇಟಿಯಾದರು.


