ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ದೇವಿಹಾಳ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸದಸ್ಯರಿಗೆ ಕೆಎಂಎಫ್ನಿಂದ ಕ್ಷೀರಯೋಜನೆ ಅಡಿಯಲ್ಲಿ ಗ್ರಾಮ ಮಟ್ಟದ ಅರಿವು ತರಬೇತಿ ಕಾರ್ಯಕ್ರಮ ಜರುಗಿತು.
ಶಾಸಕ ಡಾ.ಚಂದ್ರು ಲಮಾಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಹಿಳೆಯರು ಹೈನುಗಾರಿಕೆ ಮೂಲಕ ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಾಧ್ಯವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಕೃಷಿಯ ಜತೆಗೆ ಹೈನುಗಾರಿಕೆ ಮೂಲಕ ಹೆಚ್ಚಿನ ಆದಾಯ ನೀಡಲು ಸಾಧ್ಯವಾಗುತ್ತಿದೆ ಎಂದರು.
ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಪು? ಸಿಂಧೆ, ಕೆಎಂಎಫ್ ನಿದೇರ್ಶಕ ಲಿಂಗರಾಜಗೌಡ ಪಾಟೀಲ, ವಿ.ವಿ. ಕಪ್ಪತ್ತನವರ, ಶಿವಪ್ರಕಾಶ ಮಹಾಜನಶೆಟ್ಟರ, ತಿಪ್ಪಣ್ಣ ಕೊಂಚಗೇರಿ, ವಿಜಯಲಕ್ಷ್ಮಿ ಚವ್ಹಾಣ, ಸಂತೋ? ಉಬಾಜಿ, ಡಿ.ಟಿ. ಕಳಸದ, ಡಾ.ರಾಕೇಶ್ ತಲ್ಲೂರ, ಡಾ.ಪ್ರಸನ್ನ ಪಟ್ಟದ, ಶೇಖಪ್ಪ ಮಹಾಜನಶೆಟ್ಟರ, ದುರ್ಗಪ್ಪ ಪವಾರ, ಬಸವಣ್ಣಪ್ಪ ಯಲಿಸೂರ, ದ್ಯಾಮಣ್ಣ ಕಾಶಣ್ಣವರ, ಜಗದೀಶ್ ಸಾಸಲವಾಡ, ಯಲ್ಲಪ್ಪ ಓಲಿ, ಕೆಎಂಎಫ್ ಅಧಿಕಾರಿ ಬಸವರಾಜ ಜುಮ್ಮಣ್ಣವರ, ಕಿರಣ ಪಾಟೀಲ, ಕಿರಣ ಹುಗ್ಗಿ, ಹಾಲು ಉತ್ಪಾದಕ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.