ಪಾಶ್ಚಾಪೂರದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ

Ravi Talawar
ಪಾಶ್ಚಾಪೂರದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ
WhatsApp Group Join Now
Telegram Group Join Now
 ಅಂಕಲಗಿ ೦೬-  ಸಮೀಪದ ಪಾಶ್ಚಾ ಪೂರ  ಗ್ರಾಮದ  ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವು ಪಾಶ್ಚಾ ಪೂರ ದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ  ಇದೇ ಆಗಷ್ಟ್  10 ರಿಂದ  12 ವರೆಗೆ ಅತೀ ವಿಜ್ರಂಬಣೆಯಿಂದ ಜರುಗಲಿದೆ.
ಕುಂದರನಾಡಿನ ಮಂತ್ರಾಲಯವೆಂದೇ  ಹೆಗ್ಗಳಿಕೆಗೆ ಪಾತ್ರವಾದ ಇಲ್ಲಿ ಜಾತಿ,ಮತ, ಪಂಗಡವೆನ್ನದೇ ಜಾತ್ಯತೀತವಾಗಿ ಸೇರಿ ಸಮಭಾವದಿಂದ ಆಚರಿಸುವ 3 ದಿನಗಳ ಈ ಮಹೋತ್ಸವದಲ್ಲಿ ವಿವಿಧ ಸಾಂಸ್ಕ್ರತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆಯಲ್ಲದೆ, ಮಹೋತ್ಸವಕ್ಕೆ ಮಠಾದೀಶರು, ಗಣ್ಯರು ಆಗಮಿಸಲಿದ್ದು,  ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸುವ ಕಾರ್ಯಕ್ರಮಗಳು ಜರುಗಲಿವೆ.  ಸರ್ವ ಭಕ್ತಾದಿಗಳಿಗೂ ಮಹಾಪ್ರಸಾದದ ವ್ಯವಸ್ಥೆ ಇದ್ದು, ಸರ್ವರೂ ಆಗಮಿಸಿ . ಶ್ರೀ ರಾಘವೇಂದ್ರ ಸ್ವಾಮಿಗಳ ಕೃಪೆಗೆ ಪಾತ್ರರಾಗಬೇಕೆಂದು ಮಲ್ಲಿಕಾರ್ಜುನ ದೇವಸ್ಥಾನದ ಆರಾಧನಾ ಕಮಿಟಿ  ತಿಳಿಸಿದೆ.
WhatsApp Group Join Now
Telegram Group Join Now
Share This Article