ಧಾರವಾಡ: ಸಿ ವಿ ರಾಮನ್ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ 2025 26 ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜುನ್ ಹೊಸೂರ್ ಪಿಎಸ್ಐ ವಿದ್ಯಾ ಗಿರಿ ಪೊಲೀಸ್ ಠಾಣೆ ಧಾರವಾಡ ಹಾಗೂ ಹಿರಿಯ ಸಾಹಿತಿಗಳದ ಶಂಕರ್ ಹಲಗತ್ತಿ ಸರ್ ಅವರು ಆಗಮಿಸಿ ವಿದ್ಯಾರ್ಥಿಗಳನ್ನು ಕುರಿತು ಹಿತನುಡಿಗಳನ್ನು ಆಡಿದರು, ಕಾಲೇಜಿನ ವ್ಯವಸ್ಥಾಪಕರಾದ ಗಿರೀಶ್ ಹಾದಿಮನಿ ಹಾಗೂ ದುಂಡಯ್ಯ ಹಿರೇಮಠ್ ಅವರು ಉಪಸ್ಥಿತರಿದ್ದರು, ಪ್ರಾಚಾರ್ಯರಾದ ಅನುರಾಧ ಆರಾಧ್ಯಮಠ ಪ್ರಸ್ತಾವಿಕ ನುಡಿಗಳನ್ನು ನುಡಿದರು. ಮಾರುತಿ ಕದಮ್ ಕನ್ನಡ ಉಪನ್ಯಾಸಕರು ಸ್ವಾಗತವನ್ನು ಮಾಡಿದರು, ಬಸವರಾಜ್ ಗಬ್ಬಿಗೋಳ್, ವಂದನಾರ್ಪಣೆ ಮಾಡಿದರು, ಉಪನ್ಯಾಸಕರಾದ ಸುಧಾ, ಜಾಫರ್, ಶೀತಲ್ ಉಪಸ್ಥಿತರಿದ್ದರು