ರನ್ನ ಬೆಳಗಲಿ: ಜು.೧೨., ಪಟ್ಟಣದ ಢಪಳಾಫುರ ವಿದ್ಯಾ ವಿಹಾರ ಶಾಲೆಯಲ್ಲಿ ಶುಕ್ರವಾರ ದಂದು ಪೂರ್ವ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ವಿದ್ಯಾರಂಭ ಕಾರ್ಯಕ್ರಮ ಜರಗಿತು.
ಬೆಳಗಾವಿಯ ಶ್ರೀರಾಮಕೃ? ಮಿ?ನ್ ಆಶ್ರಮದ ಪರಮಪೂಜ್ಯ ಶ್ರೀ ಮೋಕ್ಷಾತ್ಮನಂದ ಸ್ವಾಮೀಜಿಯವರ ದಿವ್ಯ ಸಾನಿಧ್ಯವನ್ನು ಕರುಣಿಸಿ ಮಕ್ಕಳನ್ನ ಸ್ವತಂತ್ರವಾಗಿ ಬೆಳೆಸಿ, ಯಾವುದೇ ಕಟ್ಟು ನಿಯಮಗಳಿಗೆ ಬಂಧಿಸಸಬೇಡಿ. ಪರಿಸರದಲ್ಲಿ ಹೂವು ಅರಳಿದ ಹಾಗೆ ಮಕ್ಕಳ ಮನಸ್ಸು ಅರಳಬೇಕು, ಮಕ್ಕಳಿಗಾಗಿ ಶ್ರಮಿಸುತ್ತಿರುವ ನೀವು ಮಕ್ಕಳ ಜೊತೆಗೆ ಸಮಯ ನೀಡಿ. ತಂದೆ-ತಾಯಿ ಗುರುಗಳ ಅನುಕರಣೆಯಲ್ಲಿ ಮಕ್ಕಳ ಬೆಳೆಯುತ್ತಾರೆ. ಮನೆ ಮೊದಲ ಪಾಠ ಶಾಲೆಯಾಗಿದೆ ಸಂಸ್ಕಾರ ಜೊತೆಗೆ ಶಿಕ್ಷಣ ನೀಡಿದರೆ ಮಕ್ಕಳ ಸವಾಂಗಿನ ಪ್ರಗತಿಗೆ ಪೂರಕ ವಾಗುತ್ತದೆ ಎಂದು ತಿಳಿಸಿದರು.
ಸ್ವಾಮೀಜಿಯವರ ನೇತೃತ್ವದಲ್ಲಿ ಮಗುವಿನ ಔಪಚಾರಿಕ ಶಿಕ್ಷಣವನ್ನು ಮಾತೆಯರೊಂದಿಗೆ ಅಕ್ಷರಾಭ್ಯಾಸವನ್ನು ಪ್ರಾರಂಭಿಸಲಾಯಿತು.
ಶಾಲೆಯ ವ್ಯವಸ್ಥಾಪಕರಾದ ವಿವೇಕ ಢಪಳಾಪೂರ, ಪ್ರಾಂಶುಪಾಲರಾದ ಜಾಯ್, ಪೂರ್ವ ಪ್ರಾಥಮಿಕ ವಿಭಾಗದ ಕೋ ಆರ್ಡಿನೇಟರ್ ಆದ ಶ್ರೀಮತಿ ಹುಮೆರಾ, ಬೋಧಕ ಮತ್ತು ಬೋಧಕೇತರ ವೃಂದ ಪಾಲಕ,ಪೋ?ಕರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.