ಮಾದಕ ವಸ್ತುಗಳು ಜೀವನದ ದಿಕ್ಕು ದಿಕ್ಕಾಪಾಲು ಮಾಡುತ್ತದೆ. ವ್ಯಕ್ತಿತ್ವದ ಮೇಲೆ, ಸಮಾಜದ ಮೇಲೆ ಗಂಭೀರ ಸ್ವರೂಪದ ಪರಿಣಾಮ ಸೃಜಿಸುತ್ತದೆ. ಕುಟುಂಬ ಪರಿಸರಕ್ಕೂ ದುಷ್ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ಯುವಕರು ಗಾಂಜಾ, ಡ್ರಗ್ಸ್, ಆಫೀಮು,ಮದ್ಯಪಾನದ ಆಮಲಿಗೆ ಬಹುತೇಕ ಶರಣಾಗಿದ್ದಾರೆ.ಹಲವರು ಕಿಕ್ಕೇರಿಸುವ ಮಾತ್ರೆಗೆ ಜೊತು ಬಿದ್ದಿದ್ದಾರೆ. ಮಾದಕ ವಸ್ತುಗಳ ವ್ಯಾಮೋಹದಲ್ಲಿ ತಮ್ಮತನ ಕಳೆದುಕೊಂಡು ಕ್ಷಣಿಕ ತೃಷೆಯಲ್ಲಿ ಮುಳುಗುತ್ತಿದ್ದಾರೆ.ಸಾರ್ವಜನಿಕ ಸ್ಥಳಗಳಲ್ಲಿಯೇ ಮಾದಕ ವ್ಯಸನೀಗಳ ರಂಪಾಟಗಳು ಅಧಿಕಗೊಳ್ಳುತ್ತಿರುವ ಅಸಹ್ಯಕರ ಹಾವಳಿಗಳು ಅಗಾಗ ಕಂಡುಬರುತ್ತಿವೆ. ಇವುಗಳ ನಿಯಂತ್ರಣಕ್ಕೆ ದಿಟ್ಟತನ ಜನಸಾಮಾನ್ಯರಲ್ಲಿ ಬರಬೇಕು. ಮಾದಕ ವಸ್ತುಗಳ ವಿರುದ್ಧ ಯುವ ಜನ ಎತ್ಚೆತ್ತುಕೊಳ್ಳಬೇಕು ಎಂದರು.
ಗುರುಮಾತೆ ಸಹನಾ ಹತ್ತಳ್ಳಿ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕ ಈರಪ್ಪ ದೇಸಾಯಿ, ಲೋಹಿತ ಮಿಜಿ೯, ಶ್ರೀಶೈಲ ಹುಣಶಿಕಟ್ಟಿ, ಶಿಕ್ಷಕಿ ಶೃತಿ ಲಿಗಾಡೆ ಸೇರಿದಂತೆ ಜಮಖಂಡಿ ಸಿದ್ದಾರ್ಥ ಬಿಇಡಿ ಕಾಲೇಜಿನ ಪ್ರಶಿಕ್ಷಣಾಥಿ೯ಗಳು ಇತರರಿದ್ದರು.