ಬೆಳಗಾವಿ : ಮನುಷ್ಯ ಇಳಿವಯಸ್ಸಿನಲ್ಲಿ ಸಂಗೀತ, ಸಾಹಿತ್ಯ, ಚಿತ್ರಕಲೆ ಹೀಗೆ ಯಾವುದಾದರೊಂದು ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಹವ್ಯಾಸ ಮುಪ್ಪನ್ನು ಮರೆಯಿಸುತ್ತದೆ ಅಲ್ಲದೇ ನನಗೆ ವಯಸ್ಸಾಗಿದೆ ಎಂಬ ಭಾವನೆಯಿಂದ ಹೊರ ತರುತ್ತದೆ ಎಂದು ಸ್ವರಾಂಜಲಿ ಸ್ಥಾಪಕ ಚಂದ್ರಶೇಖರ ಹಿರೇಮಠ ಹೇಳಿದರು.
ಹಿಂದವಾಡಿಯಲ್ಲಿರುವ ಸ್ವರಾಂಜಲಿ ಕರೋಕೆ ಕ್ಲಬ್ ಸಂಘಟನೆಯವರು ಇದೇ ದಿ. ೨೨ ರವಿವಾರದಂದು ಹಿರಿಯ ನಾಗರಿಕರಿಗಾಗಿ ಕರೋಕೆ ಹಾಡುಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಈ ಸಂದರ್ಭದಲ್ಲಿ ಹೀರೆಮಠ ಮೇಲಿನಂತೆ ಹೇಳಿದರು.
ಚಂದ್ರಶೇಖರ ಕೌಜಲಗಿಯವರು ನವಿರಾದ ಹಾಸ್ಯ ಚಟಾಕೆಗಳೊಂದಿಗೆ ಜನರನ್ನು ರಂಜಿಸಿದರು. ಜಿ. ಎಸ್. ಸೋನಾರ್ ಮಿಮಿಕ್ರಿ ಮಾಡಿದರು.೧೯೬೦-೭೦ ನೇ ಇಸ್ವಿಯಲ್ಲಿ ತೆರೆ ಕಂಡಿರುವ ಚಲನಚಿತ್ರಗಳ ಹಾಡುಗಳನ್ನು ಕಲಾವಿದರಾದ ಕಿರಣ ಕುಲಕರ್ಣಿ, ಅನ್ವರ ಝರಿ, ಗಜಾನನ ರತನ, ಗಜಾನನ ಕರ್ಪೆ, ಶ್ರೀಮತಿ ಛಾಯಾ ಕರ್ಪೆ, ಸುನಿಲ ಧರ್ಮಾಧಿಕಾರಿ, ಎಸ್ ವಿ. ನಾಯಿಕ, ಚಂದ್ರಶೇಖರ ಕೌಜಲಗಿ, ಹರಿ ಸುತಾರ ತಮ್ಮ ಸುಶ್ರಾವ್ಯ ಕಂಠದಿಂದ ಹಾಡಿದರು. ಈ ಸಂದರ್ಭದಲ್ಲಿ ಪ್ರಭಾಕರ ಕೊಲ್ಹಾರ, ಪಾಂಡರಂಗ, ಕದಮ, ಚಂದ್ರಕಾಂತಅಪ್ಪಣ್ಣವರ, ಗುಂಡೇನಟ್ಟಿ ಮಧುಕರ, ಚಂದ್ರಶೇಖರ ಕೆ. ಹಿರೇಮಠ ಸಂಗೀತಾಸಕ್ತರು ಉಪಸ್ಥಿತರಿದ್ದರು.-