ಯೋಗ ಶಿಬಿರದ ಯಶಸ್ಸಿಗೆ ಸಹಕರಿಸಿದ ಶಾಸಕ ಸವದಿಗೆ ಅಭಿನಂದನಾ ಪತ್ರ ನೀಡಿ ಗೌರವಾರ್ಪಣೆ

Ravi Talawar
ಯೋಗ ಶಿಬಿರದ ಯಶಸ್ಸಿಗೆ ಸಹಕರಿಸಿದ ಶಾಸಕ ಸವದಿಗೆ ಅಭಿನಂದನಾ ಪತ್ರ ನೀಡಿ ಗೌರವಾರ್ಪಣೆ
WhatsApp Group Join Now
Telegram Group Join Now
ಅಥಣಿ: ಅಂತಾರಾಷ್ಟ್ರೀಯ 11 ನೇ ಯೋಗ ದಿನದ ಅಂಗವಾಗಿ ಪತಂಜಲಿ ಯೋಗ ಪೀಠ, ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲಾ ಕಾಲೇಜುಗಳ ಸಹಯೋಗದಲ್ಲಿ  ಸ್ಥಳೀಯ ಕೆ.ಎಲ್.ಇ ಮೈದಾನದಲ್ಲಿ ಆಯೋಜಿಸಿದ್ದ ಯೋಗ, ಪ್ರಾಣಾಯಾಮ, ಧ್ಯಾನ ಶಿಬಿರದ ಯಶಸ್ಸಿಗೆ ಶ್ರಮಿಸಿದ ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಇವರಿಗೆ  ಪತಂಜಲಿ ಯೋಗ ಪೀಠ ಹರಿದ್ವಾರ ಅಥಣಿ ಶಾಖೆಯ ಪದಾಧಿಕಾರಿಗಳು ಸತ್ಕರಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಿದರು.
        ಸನ್ಮಾನ ಸ್ವೀಕರಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ, ಯೋಗ, ಧ್ಯಾನ, ಪ್ರಾಣಾಯಾಮ ಶಿಬಿರದ ಯಶಸ್ಸಿಗೆ ನಾನೊಬ್ಬನೇ ಕಾರಣನಲ್ಲ ನನ್ನ ಜೊತೆಗೆ ಕಾರ್ಯನಿರ್ವಹಿಸಿದ ಪತಂಜಲಿ ಯೋಗ ಪೀಠದ ಪದಾಧಿಕಾರಿಗಳು, ಸರಕಾರಿ ಅಧಿಕಾರಿಗಳು, ಶಿಕ್ಷಕರು, ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರೆಲ್ಲರೂ ಕಾರಣ ಎಂದ ಅವರು ಅರಣ್ಯ ಇಲಾಖೆಗೆ ಸೇರಿದ ಟ್ರೀ ಪಾರ್ಕನಲ್ಲಿ ಈಗಾಗಲೇ ಯೋಗ ಕಟ್ಟೆ ನಿರ್ಮಿಸಿದ್ದು, ಮುಂದಿನ‌ ದಿನಗಳಲ್ಲಿ ಮೇಲ್ಛಾವಣಿಗೆ ಗ್ಲಾಸ್ ಅಳವಡಿಕೆಗೆ ಯೋಜನೆ ರೂಪಿಸಲಾಗುವುದು ಎಂದರು.
       ಈ ಸಂದರ್ಭದಲ್ಲಿ ಪತಂಜಲಿ ಯೋಗ ಪೀಠದ ಶಿವಾನಂದ ಬುರ್ಲಿ, ಸುರೇಶ್ ಚಿಕ್ಕಟ್ಟಿ, ರಾಮಣ್ಣ ದರಿಗೌಡರ, ಎಸ್ ಕೆ ಹೊಳೆಪ್ಪನವರ್, ಸದಾಶಿವ್ ಮುಡಗೌಡರ, ಮಹೇಶ್ ಮಮದಾಪುರ್, ದೇವೇಂದ್ರ ಬಿಸಾಗರ್, ಎಸ್. ಎಸ್ ಗೊರಜನಾಳ, ಅಪ್ಪಾಸಾಹೇಬ ತಂಬಾಟ್, ಎಸ್. ಎ. ಹೊನಗೌಡರ್, ವೆಂಕಟೇಶ ದೇಶಪಾಂಡೆ ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article