ಬಳ್ಳಾರಿ,ಜೂ.೨೮: ನಗರದ ಬಸವ ಭವನದಲ್ಲಿ ಅಂತರಾಷ್ಟ್ರೀಯ ಎಂಎಸ್ಎAಈ ದಿನಾಚರಣೆಯ ಭಾರತೀಯ ಚಾರ್ಟೆಡ್ ಅಕೌಂಟೆAಟ್ ಸಂಸ್ಥೆ ಬಳ್ಳಾರಿ ಶಾಖೆ ಆಯೋಜಿಸಿದ್ದ ಐಸಿಎಐ-ಎಂಎಸ್ಎAಇ ಮಹೋತ್ಸವ-೨೦೨೫ ಕಾರ್ಯಕ್ರಮ ನಡೆಯಿತು.
ಸಿಎ ಪನ್ನರಾಜ್ ಸಿರಿಗೇರಿ ಮಾತನಾಡಿ, ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಯುವಕರಲ್ಲಿ ನೀವು ಉದ್ಯಮಿಯಾಗಿ ಉದ್ಯೋಗ ನೀಡಬೇಕು ಮತ್ತು ರೈತ ಬಾಂಧವರ ತಮ್ಮ ಬೆಳೆಗಳನ್ನು ಲಾಭದಾಯಕವಾಗಿ ಹೇಗೆ ಬೆಳೆಯಬಹುದು ತಿಳಿಸಿದರು. ಯುವಕರಿಗೆ ಉದ್ಯಮ ಸ್ಥಾಪಿಸಲು ಮತ್ತು ರೈತರಿಗೆ ಲಾಭದಾಯಕ ಬೆಳೆ ಬೆಳೆಯಲು ಸಹಕಾರ ನೀಡುವದಾಗಿ ಸಂಸ್ಥೆಯ ಸದಸ್ಯರಿಂದ ಈ ಕಾರ್ಯಕ್ರಮದಲ್ಲಿ ಸಂಕಲ್ಪವನ್ನು ಮಾಡಲಾಯಿತು. ಉದ್ಯಮದಾರಿಕೆ ಮತ್ತು ಯುವಕರಲ್ಲಿ ಕೌಶಲ್ಯ ಅಭಿವೃದ್ಧಿ ಹೇಗೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ್ ಎಂಎಸ್ಎAಇಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಬರುವ ಸಹಾಯಧನ ಮತ್ತು ಸೌಲಭ್ಯಗಳ ಬಗ್ಗೆ ತಿಳಿಸಿದರು.
ವಿವಿಧ ಬ್ಯಾಂಕಿನ ಅಧಿಕಾರಿಗಳು ಎಂ ಎಸ್ ಎಂ ಈಗೆ ಸಾಲ ಸೌಲಭ್ಯಗಳ ವಿಷಯವನ್ನು ಮಂಡಿಸಿದರು. ಲಾಭದಾಯಕ ಕೃಷಿಗೆ ಮಾಡಬೇಕಾದ ಮಾರ್ಗೋಪಾಯಗಳ ಬಗ್ಗೆ ಜಿ ರವಿಶಂಕರ್ ಪ್ರಭಾರ ಅಧಿಕಾರಿಗಳು ಕೃಷಿ ವಿಶ್ವವಿದ್ಯಾಲಯ ಹಗರಿ ಅವರು ಮಾತನಾಡಿದರು.
ಸಿರಿಧಾನ್ಯ ಸಂಸ್ಕರಣೆ, ಮಾರಾಟ ಮತ್ತು ಯುವಕರಿಗೆ ಸಿರಿಧಾನ್ಯಗಳ ವ್ಯವಹಾರದಲ್ಲಿ ಅನೇಕ ಅವಕಾಶಗಳು ಇರುವುದರ ಮಾಹಿತಿಯನ್ನು ದವಲಪ್ಪ ಕೆ ಹಿಪ್ಪರಗಿ ರಾಯಚೂರು ಅವರು ತಿಳಿಸಿದರು. ಕೋಳಿ ಸಾಕಾಣಿಕೆ, ಆ ವ್ಯವಹಾರದಲ್ಲಿ ಇರುವ ಅವಕಾಶಗಳು ಮತ್ತು ಹೇಗೆ ಕೋಳಿ ಸಾಕಾಣಿಕೆ ಲಾಭದಾಯಕವಾಗಿದೆ ಎಂದು ಡಾಕ್ಟರ್ ಮಲ್ಲಿಕಾರ್ಜುನ್, ಬಳ್ಳಾರಿ ಅವರು ತಿಳಿಸಿದರು. ಪಶು ಸಂಗೋಪನೆಯಲ್ಲಿರುವ ವಿಪುಲ ಅವಕಾಶಗಳ ಬಗ್ಗೆ ಡಾ. ಬಿಕೆ ರಮೇಶ್ ಪ್ರಾಧ್ಯಾಪಕರು ಕೃಷಿ ವಿದ್ಯಾಲಯ ಹಗರಿ ಅವರು ತಿಳಿಸಿದರು
ಕಾರ್ಯಕ್ರಮದಲ್ಲಿ ಬಳ್ಳಾರಿ ಶಾಖೆಯ ಅಧ್ಯಕ್ಷರಾದ ಗಜರಾಜ ಡಿ, ಉಪಾಧ್ಯಕ್ಷರಾದ ಪುರುಷೋತ್ತಮ ರೆಡ್ಡಿ, ಕಾರ್ಯದರ್ಶಿಗಳಾದ ವಿಶ್ವನಾಥ್ ಆಚಾರಿ, ಖಜಾಂಚಿ ಸ್ವಪ್ನ ಪ್ರಿಯ.ಕೆ , ಸಿಎ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶರಣ ಪಾಟೀಲ್ ಮತ್ತು ಸದಸ್ಯರುಗಳು ಭಾಗವಹಿಸಿದ್ದರು.