ಬಳ್ಳಾರಿ : 28..ನಗರದ 35 ನೇ ವಾರ್ಡಿನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಒಂದೇ ದಿನದಲ್ಲಿ ಬಗೆಹರಿಸುವ ಮೂಲಕ ಸಾರ್ವಜನಿಕ ರಿಗೆ ನೀರನ್ನು ಮಹಾನಗರ ಪಾಲಿಕೆ ಸದಸ್ಯ ಶ್ರೀನಿವಾಸಲು ಮಿಂಚು ಮಾಡಿದರು.
ಹಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಒಳಚರಂಡಿ ಮಾಡುವುದರಿಂದ ಗುತ್ತಿಗೆದಾರರು ಮಾಡಿದ ಯಡವಟ್ಟಿನಿಂದ ಈ ಸಮಸ್ಯೆ ತಲೆದೋರಿತ್ತು.ಆದರೆ ಶನಿವಾರ ಒಂದೇ ದಿನದಲ್ಲಿ ಸ್ಥಳದಲ್ಲಿ ಬೀಡುಬಿಟ್ಟು ಸರಿಪಡಿಸಿ ಜನರ ಮೆಚ್ಚುಗೆಗೆ ಪಾತ್ರರಾದರು.
ವಾರ್ಡಿನಲ್ಲಿ ಇದು ಒಂದೇ ಸಮಸ್ಯೆ ಈರೀತಿ ಮಾಡಿದ್ದಾರೆ ಅಂತ ಅಲ್ಲ ಸಾರ್ವಜನಿಕರ ವೈಯಕ್ತಿಕ ಸಮಸ್ಯೆ ಇದ್ದರೂ ಕೂಡ ನೀವೆಲ್ಲ ನಮ್ಮ ಕುಟುಂಬದ ಸದಸ್ಯರು ಎಂದೇಳುವ ಮೂಲಕ ಸ್ಪಂದಿಸಿ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿದ್ದಾರೆ.
ಈ ಸಂದರ್ಭದಲ್ಲಿ ವಾರ್ಡಿನ ಸಾರ್ವಜನಿಕರು ತಮ್ಮ ಬೆಂಬಲಿಗರು ಸಾಥ್ ನೀಡಿದರು.