29 ರಂದು ಜಿಲ್ಲಾ ಲೇಖಕಿಯರ ಸಂಘದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

Ravi Talawar
29 ರಂದು ಜಿಲ್ಲಾ ಲೇಖಕಿಯರ ಸಂಘದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ
WhatsApp Group Join Now
Telegram Group Join Now
ಬೆಳಗಾವಿ: ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ  ಜಿಲ್ಲಾ ಲೇಖಕಿಯರ ಸಂಘದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಭಾನುವಾರ 29 ರಂದು 10 30ಕ್ಕೆ ಹಮ್ಮಿಕೊಳ್ಳಲಾಗಿದೆ.
ಈ ವೇಳೆ ದತ್ತಿ ದಾನಿಗಳಿಗೆ ಹಾಗೂ ಪ್ರಶಸ್ತಿ ಪುರಸ್ಕೃತರಿಗೆ ಗೌರವ ಸನ್ಮಾನ ಸಮಾರಂಭ, ಕಥಾ ವೀಜೆತರಿಗೆ ಬಹುಮಾನ ವಿರತಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸುಮಾ ಕಿತ್ತೂರ  ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ವೇತಾ ನರಗುಂದ ಹಾಗೂ ಪ್ರಭಾ ಬೋರಗಾಂವಕರ  ಆಗಮಿಸಲಿದ್ದಾರೆ.
ಲಿಂ. ಶಿವಪುತ್ರಪ್ಪ ಯಾದವಾಡ, ಹಾಗೂ ಶಶಿಕಲಾ ಯಾದವಾಡ ಪುಸ್ತಕ ಪ್ರಶಸ್ತಿ( ಪ್ರಥಮ ಕವನ ಸಂಕಲನ) ಹಾಗೂ ದಾನಿಗಳಾದ ರೋಹಿಣಿ ಯಾದವಾಡ, ಅಥಣಿ ಪ್ರಶಸ್ತಿ ಪುರಸ್ಕೃತರಾದ ಗಂಗಾದೇವಿ ಚಕ್ರಸಾಲಿ ಅವರಿಂದ ʻಮನದಂಗಳದ ಮಲ್ಲಿಗೆʼ ಕವನ ಸಂಕಲನ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ  ಸಂಘದ ವಾರ್ಷಿಕ ವರದಿ, ಲೆಕ್ಕಪತ್ರ ವರದಿ ವಾಚನ  ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಆಶಾ.ಎಸ್.ಯಮಕನಮರಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article