ಕಪ್ಪತಗುಡ್ಡ ಸಂರಕ್ಷಣೆ ಸಚಿವ ಸಚಿವ ಎಚ್ ಕೆ ಪಾಟೀಲರಿಗೆ ಹಾಗೂ ದಿ ಶ್ರೀ ಜಗದ್ಗುರು ತೋಂಟದ ಮಹಾ ಸ್ವಾಮಿಗಳಿಗೆ ಧನ್ಯವಾದಗಳು : ಸೈಯ್ಯದ್ ಖಾಲಿದ್ ಕೊಪ್ಪಳ
ಕಪ್ಪತಗುಡ್ಡ ಸಂರಕ್ಷಣೆಗಾಗಿ ಕೇಂದ್ರ ಕೇಂದ್ರದಿಂದ ಅಂತಿಮ ಅನುಮತಿಯನ್ನು ಪಡೆದಿದ್ದು ರಾಜ್ಯ ಸರ್ಕಾರ ಹಾಗೂ ಸಚಿವ ಹೆಚ್ ಕೆ ಪಾಟೀಲರು ಸತತ ಪ್ರಯತ್ನದಿಂದ ಇಂದು ಜಗದ್ಗುರು ಸಿದ್ದಲಿಂಗ ಮಹಾ ಸ್ವಾಮಿಗಳು ಹಾಗೂ ಹಲವಾರು ಹೋರಾಟಗಾರರ ಕನಸು ನನಸಾಗಿದೆ. ಅಂದು ಉಪವಾಸವನ್ನು ಕುಂತಿರುವ ಶ್ರೀ ತೋಂಟದ ಸಿದ್ದಲಿಂಗ ಮಹಾ ಸ್ವಾಮಿಗಳು ಹಾಗೂ ಹಲವಾರು ಹೋರಾಟಗಾರರು ಬಳ್ದೋಟ ಅಂತಹ ಗಣಿ ಕಂಪನಿಗಳ ವಿರುದ್ಧ ಷಡ್ ಹೊಡೆದು ಕಪ್ಪದಗುಡ್ಡವನ್ನು ರಕ್ಷಣೆಗಾಗಿ ಮುಂದಾಗಿದ್ದರು. ಅಂದಿನ ಜಿಲ್ಲಾಧಿಕಾರಿಗಳಾದ ಮನೋಜೈನ್ ಸಾರ್ವಜನಿಕ ಹವಾಲನ್ನು ಮಾಡಿ ಸಾರ್ವಜನಿಕವಾಗಿ ಅಭಿಪ್ರಾಯಗಳನ್ನು ಪಡೆದು ರಾಜ್ಯ ಸರ್ಕಾರದ ಮೇಲೆ ಒತ್ತಡವನ್ನು ಹಾಕಿ ಕಪ್ಪತ್ತಗುಡ್ಡವನ್ನು ರಕ್ಷಿಸಲು ಮುಂದಾಗಿದ್ದರು. ಅಖಿಲ ಕರ್ನಾಟಕ ಜನಶಕ್ತಿ ವೇದಿಕೆಯಿಂದ ಹಲವಾರು ಬಾರಿ ಕಪ್ಪತ ಗುಡ್ಡ ಸಂರಕ್ಷಣೆಗಾಗಿ ಹೋರಾಟವನ್ನು ಮಾಡಿದ್ದು ಇಂದು ಸಮಸ್ತ ಹೋರಾಟಗಾರರಿಗೆ ಗೆಲುವು ಆಗಿದೆ. ಅಂದಿನ ಸಚಿವರಾಗಿದ್ದ ಸಚಿವ ಹೆಚ್ ಕೆ ಪಾಟೀಲರು ಮುಖ್ಯಮಂತ್ರಿಗಳನ್ನು ಮನೋಹೊಲಿಸಿ ಕಪ್ಪತಗುಡ್ಡವನ್ನು ರಕ್ಷಣೆ ಮಾಡಿದ್ದರು ಅಂದು ನೀಡಿದ ಭರವಸೆಯನ್ನು ಸಚಿವ ಹೆಚ್ಚಿಗೆ ಪಾಟೀಲರು ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಅಂತಿಮ ಅಧಿಸೂಚನೆಯನ್ನು ಮಾಡಿ ಜಿಲ್ಲೆ ಹೆಮ್ಮೆ ಕಪ್ಪತ್ತುಗುಡ್ಡವನ್ನು ರಕ್ಷಣೆಯನ್ನು ಮಾಡಿದ್ದಾರೆ. ಅವರಿಗೆ ಸಮಸ್ತ ಗದಗ್ ಜಿಲ್ಲೆ ಯ ಜನರ ಪರವಾಗಿ ಅಭಿನಂದನೆಗಳನ್ನು ಕೊಪ್ಪಳ ರವರು ಕೋರಿದರು.
ಶ್ರೀ ನಂದಿ ಸ್ವಾಮಿಗಳು ಶ್ರೀ ತೋಂಟದ ಸಿದ್ದಲಿಂಗ ಸ್ವಾಮಿಗಳ ಜೊತೆಗೆ ಸತೃತ್ವವಾಗಿ ಕಪ್ಪದಗುಡ್ಡ ರಕ್ಷಣೆಗಾಗಿ ಹೋರಾಟವನ್ನು ಮಾಡಿದರು.ಹಾಗೂ ಹಲವಾರು ಕನ್ನಡಪರ ದಲಿತಪರ ಸಂಘಟನೆಗಳು ಪ್ರಾಮಾಣಿಕದಿಂದ ಹೋರಾಟಗಳಲ್ಲಿ ಪಾಲ್ಗೊಂಡು ಕಪ್ಪತಗುಡ್ಡ ರಕ್ಷಣೆ ಸಲುವಾಗಿ ಹೋರಾಟವನ್ನು ಮಾಡಿದ್ದಾರೆ
ಇಂದು ಎಲ್ಲ ಹೋರಾಟಗಾರರಿಗೆ ಇಂದು ಗೆಲುವು ಆಗಿದೆ ಎಂದು ಅಖಿಲ ಕರ್ನಾಟಕ ಜನಶಕ್ತಿ ವೇದಿಕೆ ರಾಜ್ಯಾಧ್ಯಕ್ಷರಾದ ಸೈಯದ್ ಖಾಲಿದ್ ಕೊಪ್ಪಳ ಪತ್ರಿಕೆ ಮುಖಾಂತರ ರಾಜ್ಯ ಸರ್ಕಾರ ಹಾಗೂ ಸಚಿವ ಎಚ್ ಕೆ ಪಾಟೀಲರಿಗೆ ಧನ್ಯವಾದಗಳು ಕೋರಿದರು.