ಜೂನ್ 30 ರಂದು ರೊಟ್ಟಿಗವಾಡದಲ್ಲಿ ಎರೆಯ ನಾಡಿನ ಅಕ್ಷರ ಕೃಷಿಕರಿಗೆ ಗುರುವಂದನೆ

Ravi Talawar
ಜೂನ್ 30 ರಂದು ರೊಟ್ಟಿಗವಾಡದಲ್ಲಿ ಎರೆಯ ನಾಡಿನ ಅಕ್ಷರ ಕೃಷಿಕರಿಗೆ ಗುರುವಂದನೆ
WhatsApp Group Join Now
Telegram Group Join Now

ರೊಟ್ಟಿಗವಾಡ ಜೂನ್ 27: ಕುಂದಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮದ ಜಿಇಸಿ ಜಿಕೆ ಹಿರೇಗೌಡರ್ ಪ್ರೌಢಶಾಲೆಯ 1994-95 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಹಾಗೂ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಸಹಪಾಠಿಗಳ ಸಹಯೋಗದಲ್ಲಿ  ಜೂನ್ 30 ರಂದು ಬೆಳಿಗ್ಗೆ 10.30 ಕ್ಕೆ  ಎರೆಯ ನಾಡಿನ ಅಕ್ಷರ ಕೃಷಿಕರಿಗೆ ಗುರುವಂದನೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಗ್ರೂಪ್ ಎಜುಕೇಶನ್ ಕಮಿಟಿ ಅಧ್ಯಕ್ಷರಾದ ಗಿರೀಶ್ ಜಿ.ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸುವರು. ನಿವೃತ್ತ ಪ್ರಾಚಾರ್ಯರಾದ ಎ.ಎಲ್.ಪೊಲೀಸ್ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸುವರು.

ನಿವೃತ್ತ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದ ಹೆಚ್.ಜಿ.ದುರಗಣ್ಣವರ್,ಬಿ.ಹೆಚ್.ಕುಲಮಿ,ಆರ್.ಎನ್.ನರಗುಂದ,ಎ.ಎಫ್.ಈರಗಾರ,ಆರ್.ಎಸ್.ಕರದ್ಯಾಮನಗೌಡ್ರ,ಎಲ್.ಬಿ.ರುದ್ರಗೌಡ್ರ,ಎಮ್.ಎನ್.ನರಗುಂದ ಅವರನ್ನು ಸನ್ಮಾನಿಸಿ,ಗೌರವಿಸಲಾಗುವುದು.
ಮುಖ್ಯೋಪಾಧ್ಯಾಯರಾದ ವಿ.ಎಸ್.ಕಬನೂರ ಉಪಸ್ಥಿತರಿರುವರು.

ಅಗಲಿದ ಗುರುಚೇತನರಾದ ಕೆ.ಎಂ.ನಾಗರಳ್ಳಿ, ಎಸ್.ಎಂ.ಹಡಪದ,ಎಂ.ಕೆ.ಅಯ್ಯನಗೌಡ್ರ,ಜಿ.ವೈ.ಸಕ್ಕರನಾಯ್ಕರ್ ಅವರನ್ನು ಹಾಗೂ ಅಗಲಿದ ಸಹಪಾಠಿಗಳ ಸ್ಮರಣೆ ಕಾರ್ಯಕ್ರಮ ಈ ಸಂದರ್ಭದಲ್ಲಿ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

WhatsApp Group Join Now
Telegram Group Join Now
Share This Article