ಕರವೇ ಸತತ ಪ್ರಯತ್ನದ ಫಲವಾಗಿ ದೈಹಿಕ ಶಿಕ್ಷಕರ ನಿಯೋಜನೆಗೆ ಶಾಸಕರು ಅಸ್ತು

Ravi Talawar
ಕರವೇ ಸತತ ಪ್ರಯತ್ನದ ಫಲವಾಗಿ  ದೈಹಿಕ ಶಿಕ್ಷಕರ ನಿಯೋಜನೆಗೆ ಶಾಸಕರು ಅಸ್ತು
WhatsApp Group Join Now
Telegram Group Join Now

ಘಟಪ್ರಭಾ.ಕರ್ನಾಟಕ ರಕ್ಷಣಾ ವೇದಿಕೆ ಸತತ ಪ್ರಯತ್ನದ ಹಿನ್ನೆಲೆಯಲ್ಲಿ ದೂಪದಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದೈಹಿಕ ಶಿಕ್ಷಕರನ್ನು ನಿಯೋಜಿಸಿದ ಶಾಸಕರಾದ  ರಮೇಶ ಜಾರಕಿಹೊಳಿಯವರಿಗೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ  ಕರವೇ ಹರ್ಷ ವ್ಯಕ್ತಪಡಿಸಿದೆ. ಈ ಸಂದರ್ಭದಲ್ಲಿ ನೂತನವಾಗಿ ನಿಯೋಜನೆಗೊಂಡ ರೆಡ್ಡಿ ಅವರಿಗೆ ಹೂಗುಚ್ಚ ನೀಡಿ ಸ್ವಾಗತಿಸಲಾಯಿತು. ಈ ಕಾರ್ಯಕ್ರಮ ಉದ್ದೇಶಿಸಿ ಎಸ್ ಡಿ ಎಮ್ ಸಿ ಉಪಾಧ್ಯಕ್ಷ ರವಿ ನಾವಿ ಮಾತನಾಡಿ  ಹಿಂದೆ  ವಿ ಟಿ ಸೋಮಕ್ಕನವರ ದೈಹಿಕ ಶಿಕ್ಷಕರು ಇದ್ದ ಕ್ರೀಡೆಯ ಗತವೈಭವವನ್ನು ನೂತನ ದೈಹಿಕ ಶಿಕ್ಷಕರು ಮರಳಿ ತರಬೇಕೆಂದು ಕಿವಿ ಮಾತು ಹೇಳಿದರು. ಈ ಸಂಧರ್ಭದಲ್ಲಿ ಕರವೇ ರೆಹಮಾನ ಮೊಕಾಶಿ ತಾಲ್ಲೂಕು ಅಧ್ಯಕ್ಷ ಶೆಟ್ಟೆಪ್ಪಾ ಗಾಡಿವಡ್ಡರ, ಲಗಮಣ್ಣಾ ನಾಗನ್ನವರ, ದರೆಪ್ಪಾ ಮಗದುಮ, ಪ್ರಕಾಶ ಮುತ್ತೆಪ್ಪಗೋಳ,ಗಜಪ್ಪ ಗಾಡಿವಡ್ಡರ, ಅಶೋಕ ಗಾಡಿವಡ್ಡರ,ಮುಖ್ಯೋಪಾಧ್ಯಾಯ ಹೊಸಮನಿ ಗುರುಗಳು  ಸೇರಿದಂತೆ ಶಾಲಾ ಶಿಕ್ಷಕರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article