ಮಾನಸಿಕ ಒತ್ತಡವನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಯೋಗದಿಂದ ಒದಗಲಿದೆ : ಪ್ರಕಾಶ ಮಠದ್

Pratibha Boi
ಮಾನಸಿಕ ಒತ್ತಡವನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಯೋಗದಿಂದ ಒದಗಲಿದೆ : ಪ್ರಕಾಶ ಮಠದ್
WhatsApp Group Join Now
Telegram Group Join Now

ಸಂಕೇಶ್ವರ : ದಿನನಿತ್ಯದ ಕೆಲಸದಲ್ಲಿ ಎದುರಾಗುವ ಮಾನಸಿಕ ಒತ್ತಡವನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಯೋಗದಿಂದ ಒದಗಲಿದೆ ಎಂದು ಪುರಸಭೆಯ ಮುಖ್ಯಾಧಿಕಾರಿಗಳಾದ ಪ್ರಕಾಶ ಮಠದ್ ಹೇಳಿದರು.

ಒಂದೇ ಮಾತರಂ ಯೋಗಾ ಕೇಂದ್ರ ಹಾಗೂ ಪುರಸಭೆಯ ಕಾರ್ಯಲಯದ ಸಂಯೋಗದಲ್ಲಿ ಪುರಸಭೆಯ ಪೌರ ಕಾರ್ಮಿಕರಿಗೆ ಮತ್ತು ಸಿಬ್ಬಂದಿಗಳಿಗೆ ೨೧ ದಿನಗಳ ಕಾಲ ಯೋಗಾಭ್ಯಾಸ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಯೋಗ ಪಟುಗಳಾದ ಅಜಯ ಸಾರಾಪೂರೆ ಮಾತನಾಡಿ, ಪುರಸಭೆಯ ಮುಖ್ಯಾಧಿಕಾರಿಗಳಾದ ಪ್ರಕಾಶ ಮಠದ ಅವರು ತಮ್ಮ ಸಿಬ್ಬಂದಿಗಳ ಹಾಗೂ ಪೌರ ಕಾರ್ಮಿಕರ ಮಾನಸಿಕ ಆರೋಗ್ಯ, ಆಧ್ಯಾತ್ಮಿಕ, ಕಾಪಾಡಿಕೊಳ್ಳಲು ಯೋಗಾಭ್ಯಾಸ ಆಯೋಜಿಸಿದಾರೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪುರಸಭೆಯ ಅಧ್ಯಕ್ಷೆ ಶೀಮಾ ಹತನೂರೆ ಹಾಗೂ ನೂತನ ಉಪಾಧ್ಯಕ್ಷ ಸಚಿನ ಭೋಪಳೆ ಅವರಿಂದ ಸಸಿಗೆ ನೀರುನಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂಧರ್ಭದಲ್ಲಿ ಪುರಸಭೆಯ ಕಂದಾಯ ನಿರೀಕ್ಷಕರಾದ ಅಶೋಕ ಹೆಗಡೆ, ಆರೋಗ್ಯ ನಿರೀಕ್ಷಕರಾದ ಶ್ರೀಧರ ಬೆಳವಿ, ಸಿಬ್ಬಂದಿಗಳಾದ ಕೃಷ್ಣಾ ಖಾತೆದಾರ, ರಾಜು ಕಾಕೋಳಿ, ರಾಜು ಪಾಟೀಲ, ರಾಜು ಖಾನಾಪೂರೆ, ಅಂಜನಾ ಪಾಟೀಲ, ಅಶ್ವೀನಿ ವಾಘಮೋಡೆ, ಸಾಗರ ಭೂಸಗೋಳ,
ಯೋಗ ಶಿಕ್ಷಕರಾದ ಮಾಹಾಂತೇಶ್ ಗಣಾಚಾರಿ, ರಾಜು ಸುತ್ತಾರ, ಕಾಡಪ್ಪಾ ಬಸ್ತವಾಡಿ, ಸೋಮ ಕೇಸ್ತಿ ಸೇರಿದಂತೆ ಅನೇಕರು.

 

WhatsApp Group Join Now
Telegram Group Join Now
Share This Article