ಬಳ್ಳಾರಿ. ಜೂನ್ 24: ನಗರದ ಡಾಕ್ಟರ್ ರಾಜಕುಮಾರ್ ರಸ್ತೆಯ ರಾಘವ ಕಲಾಮಂದಿರದಲ್ಲಿ, ರಾಘವ ಮೆಮೋರಿಯಲ್ ಅಸೋಸಿಯೇಷನ್, ವತಿಯಿಂದ ಚಾರಿತ್ರಿಕ ನಾಟಕಕಾರ ನಾಟಕ ಬ್ರಹ್ಮ ಕೋಲಾಚಲಂ ಶ್ರೀನಿವಾಸ ರಾವ್ ರವರ 106ನೇ ವಾರ್ಷಿಕ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಸಂಸ್ಥೆಯ ಪದಾಧಿಕಾರಿಗಳು ಮತ್ತು ಕೋಲಾಚಲಂ ಶ್ರೀನಿವಾಸ ರವರ ಕುಟುಂಬದವರ ಸಹಯೋಗದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಜ್ಯೋತಿ ಬೆಳಗಿಸಿ, ಪುಷ್ಪಾಂಜಲಿ ಅರ್ಪಿಸುವ ಮೂಲಕ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ನಂತರ ಕೋಲಾಚಲಂ ಶ್ರೀನಿವಾಸ ರವರ ಸಾದನೆಗಳನ್ನು ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಗಳಾದ ಎನ್ ಬಸವರಾಜ, ಚೆಲ್ಲಾ ಅಮರೇಂದ್ರ ನಾಥ ಚೌದರಿ ಸ್ಮರಿಸಿದರು.
ಕಾರ್ಯಕ್ರಮ ನಿರೂಪಣೆಯನ್ನು ಸಂಸ್ಥೆಯ ಜಂಟಿ ಕಾರ್ಯದರ್ಶಿ ಎಂ ರಾಮಾಂಜನೇಯಲು ನಿರ್ವಹಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಕೆ ಕೊಟೆಶ್ವರ ರಾವ್, ಉಪಾಧ್ಯಕ್ಷ ಹೆಚ್ ವಿಷ್ಣುವರ್ಧನ್ ರೆಡ್ಡಿ, ಕೆ ರಾಮಾಂಜನೇಯಲು, ಟಿ ವಿರುಪಾಕ್ಷ ಗೌಡ,ಗಾದೆಂ ಗೋಪಾಲ ಕೃಷ್ಣ,ಕೆ ಕೃಷ್ಣ, ಜೆ ಪ್ರಭಾಕರ,ಕೆ ಸುರೇಂದ್ರ ಬಾಬು, ಕೆ ಶ್ಯಾಮ ಸುಂದರ,ಪಿ ಶ್ರೀನಿವಾಸಲು, ಶೇಷ ರೆಡ್ಡಿ, ಬಿ ಎಂ ಬಸವರಾಜ್, ,ರಘುನಾಥ್ ರಮಣಪ್ಪ ಭಜಂತ್ರಿ ಮತ್ತು ಕೋಲಾಚಲಂ ಕುಟುಂಬದರಾದ ಕೋಲಾಚಲಂ ಶ್ರೀಧರ್ ಮತ್ತು ಕುಟುಂಬದವರು,ಕಲಾವಿದರು ಭಾಗವಹಿಸಿದ್ದರು.
ತದನಂತರ ಸಂಧ್ಯಾ ಕೋಲಾಚಲಂ ತಂಡದಿಂದ ಮತ್ತು ಎನ್ ಬಸವರಾಜ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನೇರವೇರಿಸಿದರು.