ಬೆಳಗಾವಿ: ‘ಪರಿಸರದ ಸುಸ್ಥಿರತೆಯನ್ನು ಗಣಿಗಾರಿಕೆಯ ಹೃದಯಭಾಗವಹಿಸಬೇಕು. ಗಣಿ ಪರಿಸರ ಮತ್ತು ಖನಿಜ ಸಂರಕ್ಷಣೆ ಸಪ್ತಾಹವು ಕೇವಲ ಉತ್ಸವವಾಗಬಾರದು ಇದು ಭವಿಷ್ಯದ ತಲೆಮಾರಿಗೆ ಗಣಿಗಾರರ ಬದ್ಧತೆಯಾಗಬೇಕು’ ಎಂದು ಭಾರತೀಯ ಗಣಿ ಬ್ಯೂರೋದ ಮುಖ್ಯ ಖನಿಜ ನಿಯಂತ್ರಕ ಪಂಕಜ್ ಕುಲ್ಶ್ರೇಷ್ಠ ಅವರು ಹೇಳಿದರು.
ಸ್ಥಳೀಯ ಕೆಎಲ್ಇ ಸಂಸ್ಥೆಯ ಸಭಾಭವನದಲ್ಲಿ ಯಾದವಾಡದ ಡಾಲ್ಮಿಯಾ ಸಿಮೆಂಟ್ (ಭಾರತ) ಇವರ ಆತಿಥ್ಯದಲ್ಲಿ ಭಾರತೀಯ ಗಣಿ ಬ್ಯೂರೋದ ಸಹಯೋದಲ್ಲಿ ಆಯೋಜಿಸಿದ್ದ 13ನೇ ಗಣಿ ಪರಿಸರ ಮತ್ತು ಖನಿಜ ಸಂರಕ್ಷಣೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಭವಿಷ್ಯದಲ್ಲಿ ಬೆಳವಣಿಗೆಗೆ ಅವಶ್ಯಕವಾದ ಕ್ಲಿಷ್ಟಕರವಾದ ಖನಿಜ ವಸ್ತಗಳ ಬಗ್ಗೆ ಅರಿವು ಇರಬೇಕು, ಪರಿಸರಕ್ಕೆ ಹಾನಿಯಾಗದಂತೆ ನಿಯಂತ್ರಣ ಮಾಡುವಂತಿರಬೇಕು ಎಂದರು.
ಅತಿಥಿ ದಕ್ಷಿಣ ವಲಯದ ಖನಿಜ ನಿಯಂತ್ರಕ ಶ್ರೈಲೇಂದ್ರ ಕುಮಾರ ಅವರು ಗಣಿಗಾರಿಕೆಯಲ್ಲಿ ಶ್ಲಾಘನೀಯ ಬೆಳವಣಿಗೆಯಾಗಿದ್ದು, ತಂತ್ರಜ್ಞಾನ ಆಧಾರಿತ ಸಂರಕ್ಷಣಾ ಕ್ರಮಗಳು ಮಹತ್ವ ಹೊಂದಿವೆ ಎಂದರು.
ಡಾಲ್ಮಿಯಾ ಸಿಮೆಂಟ್ನ ರಾಷ್ಟ್ರೀಯ ಉತ್ಪಾದನಾ ಮುಖ್ಯಸ್ಥ ಗಣೇಶ್ ಜಿರ್ಕುಂತ್ವಾರ್, ಡಾಲ್ಮಿಯಾ ಸಿಮೆಂಟ್ ಬೆಳಗಾವಿ ಘಟಕದ ಮುಖ್ಯಸ್ಥ ಮತ್ತು ಕಾರ್ಯಕ್ರಮದ ಸಂಯೋಜನೆಯ ಅಧ್ಯಕ್ಷ ಪ್ರಭಾತ್ ಕುಮಾರ್ ಸಿಂಗ್ ಅವರು ಕೈಗಾರಿಕೆಯ ಪರಿಸರ ಮಾನದಂಡಗಳನ್ನು ಪೂರೈಸುವ ಮತ್ತು ಆರ್ಥಿಕ ಬೆಳವಣಿಗೆಗೆ ಪರಿಸರ ಸಂಬಂಧಿತ ಹೊಣೆಗಾರಿಕೆಯನ್ನು ಹೊಂದಿರುವ ಗಣಿಕಾರಿಕೆ ಕೈಗಾರಿಕೆಗಳ ಬಗ್ಗೆ ಮಾತನಾಡಿದರು.
13ನೇ ಗಣಿ ಪರಿಸರ ಮತ್ತು ಖನಿಜ ಸಂರಕ್ಷಣೆ ಸಪ್ತಾಹದ ಸಂಚಾಲಕ ಸಂಚಾಲಕರೂ ಆಗಿರುವ ಗೋವಾ ವಲಯದ ಪ್ರಾದೇಶಿಕ ಗಣಿ ನಿಯಂತ್ರಕ ಡಾ. ನರೇಶ್ ಕುಮಾರ್ ಕಟಾರಿಯಾ ಮತ್ತು ಡಿಸಿಬಿಎಲ್ ಖನಿಜ ವಿಭಾಗದ ಮುಖ್ಯಸ್ಥ ಅನಿಲ ಕವಲೆ ಪ್ರಾಸ್ತಾವಿಕ ಮಾತನಾಡಿದರು.
‘ಉತ್ತಮ ಭವಿಷ್ಯತ್ತಿಗಾಗಿ ಸುಸ್ಥಿರ ಗಣಿಗಾರಿಕೆ’ ದ್ಯೇಯವಾಕ್ಯದಲ್ಲಿ ಜರುಗಿದ ಸಪ್ತಾಹದಲ್ಲಿ ಜವಾಬ್ದಾರಿಯುತ ಗಣಿಕಾರಿಕೆ ಮತ್ತು ಪರಿಸರ ರಕ್ಷಣೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆಯೋಜಿಸಲಾಗಿತ್ತು. ಗಣಿಗಳ ಪರಿಶೀಲನೆ, ಪರಿಸರ ಧ್ವನಿಶೀಲತೆ ತಪಾಸಣೆ, ವನಸಂಕಲನ ಅಭಿಯಾನ, ನೀರು ಸಂರಕ್ಷಣಾ ಯೋಜನೆಗಳು, ಘೋಷವಾಕ್ಯ ಮತ್ತು ಪೋಸ್ಟರ್ ಸ್ಪರ್ಧೆಗಳು, ಸಮುದಾಯ ತಲುಪುವಿಕೆ ಕಾರ್ಯಕ್ರಮಗಳ ಜರುಗಿದವು.
ಕರ್ನಾಟ ಸೇರಿದಂತೆ ಗೋವಾ, ಮಹಾರಾಷ್ಟ್ರದ 47ಕ್ಕಿಂತ ಅಧಿಕ ಗಣಿ ಪರವಾನಗಿದಾರರು ಭಾಗವಹಿಸಿದ್ದರು. ಗಣಿಗಾರಿಕೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಸಾಧನೆ ಮಾಡಿದರಿಗೆ ಪ್ರಶಸ್ತಿ ಪ್ರದಾನ ಮಾಡಿದರು.