ಧಾರವಾಡ : ಧಾರವಾಡದ ವಾರ್ಡ ನಂಬರ್ 3ರಲ್ಲಿನ ಗಾಣಿಕರ ಪಾರ್ಕನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹನ್ನೊಂದು ವರ್ಷಗಳ ಸುಶಾಸನ ಆಡಳಿತ ಅನ್ವಯ ವನಮಹೋತ್ಸವ ಕಾರ್ಯಕ್ರಮಕ್ಕೆ ಮಾಜಿಮಹಾಪೌರರು ಈರೇಶ ಅಂಚಟಗೇರಿ ಚಾಲನೆ ನೀಡಿದರು.
ಜನತೆಗೆ ಒಳಿತಾಗುವ ವಿವಿಧ ತಳಿಗಳ ಸಸಿಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ ಮಾ ಕೆ ನಾಮ ಏಕ ಪೇಡ ಕಾರ್ಯಕ್ರಮದಡಿ ನೆಟ್ಟು ನೀರುಣಿಸಿ ಪಾಲನೆ ಪೋಷಣೆಗಾಗಿ ಪಣ ತೊಟ್ಟು ವನಮಹೋತ್ಸವ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಮಾಜಿಮಹಾಪೌರರೊಂದಿಗೆ ಸುನೀಲ ಮೋರೆ ,ರಾಜೇಶ್ವರಿ ಅಳಗವಾಡಿ ,ಹಬೀಬ, ವಿಜಯ ಮೆಳವಂಕಿ, ಕೆಂಚನಳ್ಳಿ ಅಶೋಕ, ಶೆಟ್ಟರ,ಸಂಗಮೇಶ ಹಾದಿಮನಿ,ಮಂಜು ಹಾದಿಮನಿ, ಸಂಜು ಹೊಸಕೊಟಿ, ಶೇಕರ ಕವಳಿ, ಶೋಭಾ ಜಾಧವ ,ರಾಜು ಅಮ್ಮನ್ನವರ , ಹಾಗು ಪಕ್ಷದ ಕಾರ್ಯಕರ್ತರು ಗುರುಹಿರಿಯರು ಉಪಸ್ಥಿತರಿದ್ದರು.