ಅಥಣಿ ಪುರಸಭೆ ವಿಶೀಷ್ಠ ಹಾಗೂ ವಿಭಿನ್ನವಾಗಿ ಅಭಿವೃದ್ದಿ ಕಾಣಲಿದೆ: ಶಾಸಕ ಸವದಿ

Ravi Talawar
ಅಥಣಿ ಪುರಸಭೆ ವಿಶೀಷ್ಠ ಹಾಗೂ ವಿಭಿನ್ನವಾಗಿ ಅಭಿವೃದ್ದಿ ಕಾಣಲಿದೆ: ಶಾಸಕ  ಸವದಿ
WhatsApp Group Join Now
Telegram Group Join Now

ಅಥಣಿ: ರಾಜ್ಯದಲ್ಲೆ ವಿಶೇಷ ಮಾದರಿಯಲ್ಲಿ ಪುರಸಭೆ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ವಿಭಿನ್ನವಾಗಿ ಅಭಿವೃದ್ದಿಗೆ ಮುಂದಾಗಬೇಕು. ಪಟ್ಟಣ ಸೌಂದರ್ಯಕರಣ, ನೈರ್ಮಲ್ಯ, ಹಾಗೂ ಸ್ವಚ್ಚತೆಯ ಮೂಲಕ ಹಲವು ಯೋಜನೆಗಳನ್ನು ಅನುಷ್ಠಾನ ಮಾಡಬೇಕು ಎಂದು ಆಡಳಿತ ಮಂಡಳಿಗೆ ಹಾಗೂ ಪೌರ ಕಾರ್ಮಿಕರಿಗೆ ಶಾಸಕ ಲಕ್ಷö್ಮಣ ಸವದಿ ಮನವಿ ಮಾಡಿದರು
ಪಟ್ಟಣದ ಪುರಸಭಾ ಭವನದಲ್ಲಿ ಸೋಮವಾರ ೫೫ ಲಕ್ಷ ರೂ.ಗಳ ಪರಸಭೆ ಘನತ್ಯಾಜ್ಯ ನಿರ್ವಹನೆಗಾಗಿ ೧ ಅಟೋ ಟಿಪ್ಪರ, ೨ ಟ್ರಾö್ಯಕ್ಷರ್, ಸ್ಕೀಡ್ ಲೋಡರ ವಾಹನಗಳ ಲೋಕಾರ್ಪಣೆ ಹಾಗೂ ೨೦೨೨-೨೩ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ೪ನೇ ಹಂತದ ಯೋಜನೆಯಡಿ ಆಯ್ಕೆಯಾದ ೨೦೬ ಹೊಲಿಗೆ ಯಂತ್ರ ಫಲಾನುಭವಿಗಳು ಹಾಗೂ ೫೩ ಜನ ಯುಪಿಎಸ್ ಬ್ಯಾಟರಿ ಫಲಾನುಭವಿಗಳಿಗೆ ಶಾಸಕ ಲಕ್ಷö್ಮಣ ಸವದಿ ಅವರು ಸಲಕರಣೆಗಳನ್ನು ಸಾಂಕೇತಿಕವಾಗಿ ವಿತರಣೆ ಮಾಡಿದರು.
ನಂತರ ಮಾತನಾಡಿ ಶಾಸಕ ಲಕ್ಷö್ಮಣ ಸವದಿ ಅವರು ಬಡತನ ರೇಖೆಗಿಂತ ಕೆಳಗೆ ಇರುವ ಅರ್ಹ ಫಲಾನುಭವಿಗಳು ತಮ್ಮ ಜೀವನದಲ್ಲಿ ಸ್ವಾವಲಂಬನೆಯ ಬದುಕು ಬದುಕಲು ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಹೊಲಿಗೆ ಯಂತ್ರ ಹಾಗೂ ವಿದ್ಯುತ್ ಅಭಾವ ಇದ್ದಾಗ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದು ಅನ್ನುವ ಉದ್ದೇಶದಿಂದ ಯುಪಿಎಸ್ ಹಾಗೂ ಬ್ಯಾಟರಿಗಳನ್ನು ನೀಡಿ ಕತ್ತಲ ಬದುಕಿನಿಂದ ಬೆಳಕಿನಡೆಗೆ ಜೀವನ ಸಾಗಿಸಲು ಸಾದ್ಯವಾಗುತ್ತದೆ. ಅಲ್ಲದೆ ಪಟ್ಟಣದ ಸೌಂದರ್ಯಕರಣ ಮಾಡಲು ಪ್ರಮುಖ ರಸ್ತೆಗಳ ಬದಿಯಲ್ಲಿ ಹಾಗೂ ಡಿವೈಡರ್‌ಗಳ ಮದ್ಯದಲ್ಲಿ ಒಂದೇ ರೀತಿಯ ಮರದ ಸಸಿಗಳನ್ನು ನೇಡುವ ಮೂಲಕ ಸುಂದರೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು. ಒಂದು ವರ್ಷದ ಅವಧಿಯಲ್ಲಿ ೨೫ ಸಾವಿರ ಸಸಿಗಳನ್ನು ನೇಟ್ಟು ಅವುಗಳ ನಿರ್ವಹಣೆಗೆ ಅದ್ಯತೆ ನೀಡುವ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು
ಬಾಕ್ಷ೧: ಪರಸಭೆ ಸದಸ್ಯ ದತ್ತಾ ವಾಸ್ಟರ ಸ್ವಂತ ಖರ್ಚಿನಲ್ಲಿ ಸತ್ತಿ ರಸ್ತೆಯ ಸಾಯಿ ಮಂದಿರ ಬಳಿ ಒಂದು ಹಾಗೂ ಹಲ್ಯಾಳ ಸರ್ಕಲ್ ಬಳಿ ಒಂದು ಒಟ್ಟು ಎರಡು ಬಸ್ ನಿಲ್ದಾಣಗಳನ್ನು ೧೦ ಲಕ್ಷ ರೂ.ಗಳ ವ್ಯಚ್ಚದಲ್ಲಿ ನಿರ್ಮಿಸುವ ಕಾರ್ಯವನ್ನು ಮಾಡುವ ವಾಗ್ದಾನ ಮಾಡುತ್ತೇನೆ. ಅಲ್ಲದೆ ಹಲ್ಯಾಳ ಸರ್ಕನಿಂದ ಸಿದ್ದೇಶ್ವರ ದೇವಸ್ಥಾನದ ವರೆಗೆ ರಸ್ತೆ ಡಿವೈಡರ್‌ಗಳ ಮದ್ಯ ೫೦೦ ಮರದ ಸಸಿಗಳನ್ನು ನೇಟ್ಟು ನಿರ್ವಹಣೆ ಮಾಡುತ್ತೇನೆ ಎಂದು ಹೇಳಿದರು
ಈ ವೇಳೆ ಪುರಸಭೆ ಅಧ್ಯಕ್ಷೆ ಶಿವಲಿಲಾ ಬುಟಾಳೆ, ಉಪಾಧ್ಯಕ್ಷ ಭುವನೇಶ್ವರಿ ಯಂಕAಚಿ, ಮಾಜಿ ಅಧ್ಯಕ್ಷ ದಿಲೀಪ ಲೋಣಾರೆ, ಸದಸ್ಯರಾದ ದತ್ತಾ ವಾಸ್ಟರ, ಸಂತೋಷ ಸಾವಡಕರ, ರಾಜೂ ಗುಡೋಡಗಿ, ರಿಜಾಜ ಸನದಿ, ಮಲ್ಲು ಹುದ್ದಾರ, ಉದಯ ಸೋಳಶಿ, ಮಲ್ಲಿಕಾರ್ಜುನ ಬುಟಾಳೆ, ಪ್ರಮೋದ ಬಿಳ್ಳೂರ, ಬಸವರಾಜ ನಾಯಿಕ, ಬಿ ಎಮ್ ಪಾಟೀಲ, ಶಾಂತಾ ಲೋಣಾರೆ, ಮೃಣಾಲಿನಿ ದೇಶಪಾಂಡೆ, ರಾಮನಗೌಡ ಪಾಟೀಲ, ವಿನಾಯಕ ದೇಸಾಯಿ ಹಾಗೂ ಮುಖಂಡರಾದ ರವಿ ಬಡಕಂಬಿ, ಆಶೀಫ್ ತಾಂಬೋಳಿ, ಮಹಾಂತೇಶ ಬಾಡಗಿ, ಬಾಬು ಖೇಮಲಾಪೂರ, ಪರಸಭೆ ಮುಖ್ಯಾದಿಕಾರಿ ಅಶೋಕ ಗುಡಿಮನಿ ಸೇರಿದಂತೆ ಹಲವು ಮುಖಂಡರು ಹಾಗೂ ಪುರಸಭೆ ಸಿಬ್ಬಂದಿಗಳು ಮತ್ತು ಕಾರ್ಮಿಕರು ಉಪಸ್ಥಿತರಿದ್ದರು

WhatsApp Group Join Now
Telegram Group Join Now
Share This Article