ಕಾಗವಾಡ:ಪ್ರತಿದಿನ ಯೋಗವನ್ನು ಮಾಡುವುದು ಉತ್ತಮ. ಯೋಗ ಮಾಡುವುದರಿಂದ ಮನಸ್ಸು ಮತ್ತು ದೇಹವೆರಡು ಚೈತನ್ಯದಿಂದ ತುಂಬಿರುತ್ತದೆ ಎಂದು ತಹಶೀಲ್ದಾರ್. ರಾಜೇಶ ಬುರ್ಲಿ ಹೇಳಿದರು.
ಅವರು ಶನಿವಾರ ಪಟ್ಟಣದಲ್ಲಿತಾಲೂಕ ಆಡಳಿತ ವತಿಯಿಂದ ಮಲ್ಲಿಕಾರ್ಜುನ ವಿದ್ಯಾಲಯದಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಪ್ರತಿ ವರ್ಷವು ಯೋಗ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದೇವೆ ಈ ವರ್ಷವು ಸಹ ಯೋಗ ದಿನ ಆಚರಿಸುತ್ತಿದ್ದು ಇದು ಕೇವಲ ಜೂನ್ 21 ಕ್ಕೆ ಮಾತ್ರ ಸಿಮಿತವಾಗದೆ ಪ್ರತಿಯೊಂದು ಶಾಲೆಯಲ್ಲಿ ದೈಹಿಕ ಶಿಕ್ಷಕರು ಮಕ್ಕಳಿಗೆ ಯೋಗದ ಲಾಭವನ್ನು ಅದರ ಉಪಯೋಗಗಳನ್ನು ತಿಳಿಸಬೇಕೆಂದರು
.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮುಖ್ಯಾ ಧಿಕಾರಿ ಕೆ .ಕೆ ಗಾವಡೆ , ಸಿಡಿಪಿಓ. ಸಂಜೀವಕುಮಾರ ಸದಲಗಿ, ಬಿ ಇ ಓ. ಎಮ್ ಆರ್ ಮುಂಜೆ..ಗ್ರೇಡ್ 2.ತಹಸಿಲ್ದಾರ ಅಣ್ಣಾಸಾಬ ಕೋರೆ, ಸಂತೋಷ್ ಬಾಯನಾಯಕೆ ಎಸ್ ಹುಲೋಳೆಕಾರ,ಮುಖ್ಯೋಪದ್ಯಾಯ ಆರ್ ಟಿ ಗುರವ, ದೈಹಿಕ ಶಿಕ್ಷಕರಾದ ವಿನಾಯಕ ರಾಮದುರ್ಗ, ನೇತಾಜಿ ತಳವಾರ,ಎಲ್ಲ ಶಿಕ್ಷಕಿಯರು ವಿಧ್ಯಾರ್ಥಿ ವಿಧ್ಯಾರ್ಥಿನಿಯರು ಮತ್ತು ಸಿಬ್ಬಂದಿ ವರ್ಗದವರು ಯೋಗಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.