ಘಟಪ್ರಭಾ. ಪ್ರತಿ ದಿನ ಕೆಲವೊಂದು ಸಮಯ ಯೋಗ ಮಾಡಿ ಶರೀರವನ್ನು ಸ್ವಾಸ್ತ್ಯ ಗೊಳಿಸಿ, ಸಧೃಡವಾಗಿ ಇಟ್ಟುಕೊಂಡು ಮುಂದೆ ಹೋಗಬೇಕೆಂದು ಹಿರಿಯ ಮುಖಂಡರಾದ ಸುರೇಶ ಪಾಟೀಲ ಮತ್ತು ಸಾಮಾಜಿಕ ಹೋರಾಟಗಾರರಾದ ಶ್ರೀಕಾಂತ ಮಾಹಾಜನ್ ಹೇಳಿದರು.
ಅವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ಯವಾಗಿ ಜೆ ಜಿ ಸಹಕಾರಿ ಆಸ್ಪತ್ರೆ, ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಜೈಂಟ್ಸ್ ಗ್ರೂಪ್ ಆಫ್ ಘಟಪ್ರಭಾ, ಶ್ರೀ ರಾಮ ಪ್ರಭಾತ ಶಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಯೋಗ ಶಿಬಿರ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಭೂಪಾಲ್ ಖೆಮಲಾಪುರೆ, ಜಯಂತ ಶರ್ಮಾ ಅವರು ಮಾತನಾಡದರು. ಡಾ ವಿ ಬಿ ನಾಯಿಕವಾಡಿ, ವಿಠ್ಠಲ ಕೌಜಲಗಿ ಮುಂತಾದವರು ವೇದಿಕೆಯಲ್ಲಿ ಇದ್ದರು. ಎಲ್ ಎಸ್ ಹಿಡಕಲ್ ಸ್ವಾಗತಿಸಿದರು. ಡಾ ಎನ್ ವಾಯ್ ಪಾಟೀಲ, ರಮೇಶ್ ಕಬಾಡಗಿ, ಈಶ್ವರ ಚೌಗಲಾ, ಸುರೇಶ ಕರೋಶಿ, ಆನಂದ ದೇಶಪಾಂಡೆ, ಮಹಾದೇವ ಯರನಾಳ, ಸುಭಾಷ ಗಾಯಕ್ವಾಡ, ಗುರು ಚಚಡಿ, ಪ್ರಭುಲಿಂಗ ಅಂತರಗಂಗಿ, ಕೆಂಪಣ್ಣ ಚೌಕಾಶಿ, ಕಲ್ಲಪ್ಪ ಕಾಳಗೆ, ಸಂತೋಷ ದೇಶಪಾಂಡೆ, ಕೆ ಪಿ ಕಳ್ಳೀಮಠ, ಸಂದೀಪ ಪೇಟಕರ ಮುಂತಾದವರು ಭಾಗವಹಿಸಿದ್ದರು.