ಮಕ್ಕಳ ಸಾಹಿತಿ ಶಿವಲಿಂಗಪ್ಪ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಪುರಸ್ಕಾರ 

Ravi Talawar
ಮಕ್ಕಳ ಸಾಹಿತಿ ಶಿವಲಿಂಗಪ್ಪ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಪುರಸ್ಕಾರ 
WhatsApp Group Join Now
Telegram Group Join Now
ಬಳ್ಳಾರಿ ಜೂನ್ 21: ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ಮಕ್ಕಳ ಸಾಹಿತ್ಯಕ್ಕಾಗಿ  ಪ್ರತಿವರ್ಷ ನೀಡುವ 2025 ನೇ ಸಾಲಿನ  ಬಾಲ ಪುರಸ್ಕಾರ ಪ್ರಶಸ್ತಿ  ಬಳ್ಳಾರಿ ತಾಲೂಕಿನ ಹಂದಿಹಾಳ ಗ್ರಾಮದ ಶಿಕ್ಷಕ, ಮಕ್ಕಳ ಸಾಹಿತಿ ಡಾ. ಹಂದಿಹಾಳು ಶಿವಲಿಂಗಪ್ಪ ಇವರಿಗೆ ಲಭಿಸಿದೆ.
 ಇವರು ಇಲ್ಲಿಯವರಿಗೆ ರಚಿಸಿದ ಕೃತಿಗಳು ಮತ್ತು ಪುರಸ್ಕಾರಗಳು ಈ ಕೆಳಗಿನಂತಿವೆ.
ನೋಟ್‌ಬುಕ್ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರದ
ಪುಸ್ತಕ ಸೊಗಸು ಪ್ರಶಸ್ತಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಪ್ರಶಸ್ತಿ, ವೀಚಿ ಪ್ರಶಸ್ತಿ ಲಭಿಸಿದೆ.
ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನ ಸಹಾಯ (2010), ಕರವೇ ನಲ್ನುಡಿ ಕಥಾ ಪ್ರಶಸ್ತಿ(2012).
ಅಜೂರು ಪ್ರತಿಷ್ಠಾನ ಪ್ರಶಸ್ತಿ(2017)ರಾಯಭಾಗದ ಹಾರೋಗೇರಿ ಸಂಸ್ಥೆ, ಅಷ್ಟ ದಿಗ್ಗಜ
ಪ್ರಶಸ್ತಿ(2017)ಹೈದರಾಬಾದಿನ ಗುತ್ತಿ ನಾರಾಯಣರೆಡ್ಡಿ ತೆಲುಗು ಪೀಠಂ ವತಿಯಿಂದ, ಶ್ರೀ ಕೃಷ್ಣ ದೇವರಾಯ
ವಂಶಸ್ಥರಿAದ ಕೊಡಲ್ಪಟ್ಟ ರಾಷ್ಟ್ರೀಯ ಪ್ರಶಸ್ತಿ, ‘ದಿ ಯಂಗ್ ಸೈಂಟಿಸ್ಟ್’ ಮಕ್ಕಳ ಕಾದಂಬರಿಗೆ ಭಾರತ ದೇಶದ
ಪ್ರಕಾಶಕರ ಒಕ್ಕೂಟ ಕೊಡಮಾಡುವ ಉತ್ತಮ ಪುಸ್ತಕ ಪ್ರಶಸ್ತಿಗಳಲ್ಲಿ ಈ ಕೃತಿ 22 ಭಾಷೆಗಳಲ್ಲಿಯೇ ಪ್ರಥಮ
ಬಹುಮಾನ(2019) ಪಡೆದುಕೊಂಡಿದೆ. ಮಕ್ಕಳ ಸಾಹಿತ್ಯ ಕ್ಷೇತ್ರದ ಸೇವೆಗಾಗಿ ‘ರಾಜ್ಯ ಮಟ್ಟದ ಸಾಹಿತ್ಯ ಸಿರಿ
ಪ್ರಶಸ್ತಿ’ 2020. ಪಡೆದುಕೊಂಡಿದ್ದಾರೆ.
 ಪ್ರಶಸ್ತಿಗೆ ಭಾಜನರಾದ  ಶಿವಲಿಂಗಪ್ಪ ಅವರಿಗೆ  ಸ್ನೇಹಿತರು  ಅಭಿನಂದನೆಗಳನ್ನು ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article