ಬಳ್ಳಾರಿ,ಜೂ.20: ನಗರದ ಬೆಂಗಳೂರಿನ ಕೃಷಿ ಇಲಾಖೆಯಲ್ಲಿ ಶರಣಪ್ಪ ಮುದಗಲ್ ಅವರು ಸಹಾಯಕ ನಿರ್ದೇಶಕರಾಗಿ ಇತ್ತೀಚೆಗೆ ಅಧಿಕಾರವನ್ನು ಸ್ವೀಕರಿಸಿದ್ದಾರೆ.
ಈ ಸಮಾರಂಭದಲ್ಲಿ ಬಳ್ಳಾರಿ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಜಿಲ್ಲಾಧ್ಯಕ್ಷರಾದ ಹೆಚ್.ತಿಮ್ಮನ ಗೌಡ ಅವರು ಮತ್ತು ಅವರ ಎಲ್ಲಾ ಸಹಪಾಠಿಗಳು ಶರಣಪ್ಪ ಮುದುಗಲ್ ಅವರನ್ನು ಗೌರವಿಸುವ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕುರುಗೋಡು ಉಪಾಧ್ಯಕ್ಷರಾದ ಅರವಿ
ಶರಣಬಸವನ ಗೌಡ, ಸಿರುಗುಪ್ಪ ತಾಲೂಕು ಅಧ್ಯಕ್ಷರಾದ ಮಾಧವಯ್ಯ, ಅಮೃತ ಅಗ್ರೋ ಏಜೆನ್ಸಿಸ್ ಸಿದ್ದಪ್ಪ, ಲಕ್ಷ್ಮಿ ಸಾಯಿ ಟ್ರೇಡಿಂಗ್ ಕಂಪನಿ ಸುರೇಶ್, ಮೋಕಾ ವೆಂಕಟೇಶ್ವರ ಅಗ್ರೊ ಏಜೆನ್ಸಿಸ್ ಜಾಲಿಹಾಳ್ ನವೀನ್ ಕುಮಾರ್, ಬಳ್ಳಾರಿ ಮೂರ್ತಿ ರೆಡ್ಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.