ಕಡ್ಡಾಯ ಶಿಕ್ಷಣದ ಮೂಲಕ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಿ : ಕಾಗೆ

Pratibha Boi
ಕಡ್ಡಾಯ ಶಿಕ್ಷಣದ ಮೂಲಕ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಿ : ಕಾಗೆ
WhatsApp Group Join Now
Telegram Group Join Now
ಕಾಗವಾಡ :ಮಹಿಳೆಯರು ಯಾರ ಮೇಲೂ ಅವಲಂಬಿತರಾಗದೆ ಸರ್ಕಾರದ ಯೋಜನೆಗಳು ಹಾಗೂ ಕಡ್ಡಾಯ ಶಿಕ್ಷಣದ ಮೂಲಕ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಸರಕಾರ ಮಹಿಳೆಯರಿಗೆ ಹೊಲಿಗೆ ಯಂತ್ರಗಳು ನೀಡಲಾಗಿದ್ದು ನಿಮ್ಮ ಉಪಜೀವನಕ್ಕಾಗಿ ಇದರ ಸದುಪಯೋಗ ಮಾಡಿಕೊಂಡು ಬದುಕು ನಡೆಸಬೇಕು ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
 ಅವರು ದಿ 20ರಂದು ಶುಕ್ರವಾರ ಕಾಗವಾಡ ಪಟ್ಟಣ ಪಂಚಾಯತಿಯಲ್ಲಿ ಆಯೋಜಿಸಿದ. ಸನ್ 2024-25 ರಲ್ಲಿ ಮುಖ್ಯ ಮಂತ್ರಿಗಳ ನಗರೋತನ ಯೋಜನೆ ಹಂತ 4ರ ಅಡಿಯಲ್ಲಿ 314 ಹೊಲಿಗೆ ಯಂತ್ರಗಳು ಹಾಗೂ ಎಸ್ ಎಫ್ ಸಿ ಮುಕ್ತ ನಿಧಿ ಅನುದಾನ ಅಡಿಯಲ್ಲಿ ಮಂಜೂರಾದ ,ಮುಕ್ತಿ ವಾಹನಕೆ ಪೂಜೆ ಸಲ್ಲಿಸಿ ಮಾತನಾಡುತ್ತಾ ರಾಜ್ಯ ಸರ್ಕಾರ ಪ್ರತಿಯೊಂದು ಪಟ್ಟಣಗಳಲ್ಲಿ ಶುದ್ದ ಕುಡಿಯುವ ನೀರು, ಒಳ್ಳೆಯ ರಸ್ತೆ, ಚರಂಡಿ, ವಿದ್ಯುತ ದೀಪ ವ್ಯವಸ್ಥೆ ಮೂಲ ಭೂತ ಸೌಕರ್ಯಗಳು ನೀಡುತ್ತಿದೆ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು
ಇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಕರ್ನಾಟಕ ಸರ್ಕಾರದಿಂದ ಪಟ್ಟಣ ಪಂಚಾಯತಿ ನಾಮನಿರ್ದೇಶಕರಾಗಿ ಆಯ್ಕೆ ಯಾದ ಶಾಂತಿನಾಥ ಕರವ,ಪ್ರಕಾಶ್ ಪಾಟೀಲ,ಕಾಕಾ ಪಾಟೀಲ ಇವರನ್ನು ಶಾಸಕರು ಸನ್ಮಾನಿಸಿದರು
ಇ ಸಂದರ್ಭದಲ್ಲಿ. ತಹಶೀಲ್ದಾರ್ ರಾಜೇಶ ಬುರ್ಲಿ,ಪಟ್ಟಣ ಪಂಚಾಯತಿ ಮುಖ್ಯಧಿಕಾರ. ಕೆ ಕೆ ಗಾವಡೆ,ಶಂಕರ್ ವಾಗಮೋಡೆ ಮುಖಂಡರು ಸೌರಭ ಪಾಟೀಲ ಜ್ಯೋತಿಕುಮಾರ ಪಾಟೀಲ,ರಮೇಶ ಚೌಗಲಾ,ಚಿದಾನಂದ್ ಅವಟಿ,ಪವನ ಪಾಟೀಲ, ವಿದ್ಯಾದರ್ ಧೋಡಾರೆ, ಪದ್ಮನಾಥ ಕರವ, ಅಶೋಕ್ ಕಾಂಬಳೆ ಶಂಕರ್ ಕಾಂಬಳೆ, ಮಹಾಂತೇಶ್ ಬಡಿಗೇರ, ಜಯಪಾಲ್ ಬಡಿಗೇರ, ಸುಭಾಷ ತುಪಳೆ,ಅಸ್ಲಾಂ ಮಕಾನದಾರ, ಬಾಬು ಸಯ್ಯದ ಹಾಗೂ ಸಾರ್ವಜನಿಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article