೨೩ರಂದು ಮಾಜಿ ಸಚಿವ ಲಿಂ. ಎಸ್.ಆರ್. ಕಾಶಪ್ಪನವರ ೨೩ನೇ ಪುಣ್ಯ ಸ್ಮರಣೆ

Pratibha Boi
WhatsApp Group Join Now
Telegram Group Join Now

ಹುನಗುಂದ; ಶ್ರೀ ಎಸ್.ಆರ್. ಕಾಶಪ್ಪನವರ ಸ್ಮಾರಕ ಪ್ರತಿಷ್ಠಾನ ಇಲಕಲ್‌ದಿಂದ ಹುನಗುಂದ ತಾಲೂಕಿನ ಹಾವರಗಿ ಗ್ರಾಮದ ಎಸ್‌ಎಂಎಸ್ ಪ್ರೌಢಶಾಲೆ ಆವರಣದಲ್ಲಿ ಜೂನ್ ೨೩ರಂದು ಬೆಳಿಗ್ಗೆ ೧೦-೩೦ಕ್ಕೆ ಜನಾನುರಾಗಿ, ಮುತ್ಸದ್ದಿ ನಾಯಕ, ಮಾಜಿ ಸಚಿವ ಲಿಂ. ಎಸ್.ಆರ್. ಕಾಶಪ್ಪನವರ ೨೩ನೇ ಪುಣ್ಯ ಸ್ಮಮರಣೆ ಮತ್ತು ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯುವದು. ಶ್ರೀಮದ್ ರಂಭಾಪುರಿ ವಿರ ಸಿಂಹಾಸನಾಧೀಶ್ವರ ಶ್ರೀ ರಂಭಾಪುರಿ ಪೀಠದ ಡಾ. ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್‍ಯ ಭಗವತ್ಪಾದಕರು, ಉಜ್ಜಯಿನಿ ಪೀಠದ ಶ್ರೀಮದ್ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ೧೦೦೮ ಜಗದ್ಗುರು ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್‍ಯ ಭಗವತ್ಪಾದಕರು, ಕೇದಾರ ಪೀಠದ ಶ್ರೀಮದ್ ವೈರಾಗ್ಯ ಸಿಂಹಾಸನಾಧೀಶ್ವರ ೧೦೦೮ ಜಗದ್ಗುರು ಭೀಮಾಶಂಕರ ಲಿಂಗ ಶಿವಾಚಾರ್‍ಯ ಭಗವತ್ಪಾದಕರು, ಶ್ರಿಶೈಲ ಪೀಠದ ಶ್ರೀಮದ್ ಗಿರಿರಾಜ ಸೂರ್‍ಯ ಸಿಂಹಾಸನಾಧೀಶ್ವರ ಶ್ರೀ ೧೦೦೮ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್‍ಯ ಭಗವತ್ಪಾದಕರು, ಕಾಶೀ ಪೀಠದ ಶ್ರೀಮದ್ ಕಾಶೀ ಜ್ಞಾನ ಸಿಂಹಾಸನಾಧೀಶ್ವರ ಶ್ರೀ ೧೦೦೮ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್‍ಯ ಭಗವತ್ಪಾದಕರು, ಮತ್ತು ಕಾಶೀ ಪೀಠದ ನೂತನ ಪೀಠಾಧೀಶ್ವರರು, ಡಿಂಡವಾರದ ಕುಮಾರಲಿಂಗ ಶಿವಾಚಾರ್‍ಯ ಸ್ವಾಮಿಗಳು, ಹಡಗಲಿ-ನಿಡಗುಂದಿಯ ರುದ್ರಮುನಿ ಶಿವಾಚಾರ್‍ಯ ಸ್ವಾಮಿಗಳು, ಬಿಲ್‌ಕೆರೂರ್ ಅಡವಿಹಾಳದ ಸಿದ್ದಲಿಂಗ ಶಿವಾಚಾರ್‍ಯ ಸ್ವಾಮಿಗಳು, ನಂದವಾಡಗಿ ಆಳಂದದ ಮಹಾಂತಲಿಂಗ ಶಿವಾಚಾರ್‍ಯ ಸ್ವಾಮಿಗಳು, ಗಿರಿಸಾಗರದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ಕಮತಗಿ-ಕೊಟೆಕಲ್ ಹೊಳೆ ಹುಚ್ಚೇಶ್ವರ ಸ್ವಾಮಿಗಳು, ಅಮೀನಗಡದ ಶಂಕರ ರಾಜೇಂದ್ರ ಸ್ವಾಮಿಗಳು, ಸಿದ್ದನಕೊಳ್ಳದ ಡಾ. ಶಿವಕುಮಾರ ಸ್ವಾಮಿಗಳು, ಹುನಗುಂದದ ಅಮರೇಶ್ವವರ ದೇವರು ಸೇರಿದಂತೆ ಹರಗುರು ಚರ ಮೂರ್ತಿಗಳು ಸಾನಿಧ್ಯವಹಿಸುವರು. ಎಸ್‌ಆರ್‌ಕೆ ಸ್ಮಾರಕ ಪ್ರತಿಷ್ಠಾನದ ಗೌರವಾಧ್ಯಕ್ಷೆ ಮಾಜಿ ಶಾಸಕಿ ಶ್ರೀಮತಿ ಗೌರಮ್ಮ ಕಾಶಪ್ಪನವರ, ಪ್ರತಿಷ್ಠಾನದ ಅಧ್ಯಕ್ಷ ಶಾಸಕ ವಿಜಯಾನಂದ ಕಶಪ್ಪನವರ, ಜಿಪಂ ಮಾಜಿ ಅಧ್ಹಯಕ್ಷೆ ವೀಣಾ ಕಾಶಪ್ಪನವರ, ಪ್ರತಿಷ್ಠಾನ ಖಜಾಂಚಿ ದೇವಾನಂದ ಕಾಶಪ್ಪನವ್, ನ್ಯಾಯವಾದಿ ಸಿ.ವಿ ಕೋಟಿ, ಪ್ರತಿಷ್ಠಾನದ ಕಾರ್‍ಯದರ್ಶಿ ಬಸವರಜ ಶಿರೂರ್ ಉಪಸ್ಥಿತರಿರುವರು. ಇದೆ ರೀತಿ ಜೂನ್ ೨೨ರಂದು ಬೆಳಿಗ್ಗೆ ೧೦-೩೦ಕ್ಕೆ ಇಲಕಲ್ಲ ನಗರದ ಕಂಠಿ ವೃತ್ತದ ಹತ್ತಿರದ ಅನುಭವ ಮಂಟಪದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ನಡೆಯುವದು. ಚಿತ್ತರಗಿ ಸಂಸ್ಥಾನಮಠದ ಇಲಕಲ್ಲ ಗುರುಮಹಾಂತ ಶ್ರೀಗಳು, ಶಿರೂರ ಮಹಾಂತ ತೀರ್ಥದ ಡಾ. ಬಸವಲಿಂಗ ಸ್ವಾಮಿಗಳು, ಇಲಕಲ್ಲ ಹನಮಸಾಗರದ ಪೂಜ್ಯಶ್ರೀ ಹಜರತ್ ಸೈಯದ್ ಡಾ. ಮುರ್ತುಜಾ ಖಾದ್ರಿ ಹುಸೈನ್ ಉರ್ಫ ಪೈಸಲ್ ಪಾಶಾ ದಿವ್ಯ ಸಾನಿಧ್ಯ ವಹಿಸುವರು. ಅವಳಿ ತಾಲೂಕಿನ ಜನಪ್ರತಿನಿಧಿಗಳು ಗಣ್ಯರು ಪಾಲ್ಗೊಳ್ಳುವರೆಂದು ಪ್ರಕಟಣೆ ತಿಳಿಸಿದೆ.

WhatsApp Group Join Now
Telegram Group Join Now
Share This Article