ಸಂಭ್ರಮದಿಂದ ಜರುಗಿದ ಉಭಯ ಗುರುಗಳ ಮಹಾ ರಥೋತ್ಸವ 

Ravi Talawar
WhatsApp Group Join Now
Telegram Group Join Now
ಗದಗ : ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪರಮಪೂಜ್ಯ ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ 81ನೇ ಹಾಗೂ ಪದ್ಮಭೂಷಣ ಲಿಂ.ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ  ಸೋಮವಾರ ಸಂಜೆ ಮಹಾರಥೋತ್ಸವ ಜರುಗಿತು.
 ಭವ್ಯ ಅಲಂಕಾರದಿAದ ಕಂಗೊಳಿಸುತ್ತ  ಮಹಾರಥವು ಮುಂದೆ ಸಾಗುತ್ತಿದ್ದಂತೆ  ಭಕ್ತರು ಉಭಯ ಗುರುಗಳ ನಾಮಸ್ಮರಣೆ ಮಾಡುತ್ತ ಜಯಘೋಷ ಹಾಕಿದರು. ಜಾತ್ರೆಯೂದ್ದಕ್ಕೂ ಸಂಭ್ರಮಕ್ಕೆ ಪಾರವೇ ಇರಲಿಲ್ಲ.  ಈ ಸಂದರ್ಭದಲ್ಲಿ  ಹುಬ್ಬಳ್ಳಿಯ ಮೂರು ಸಾವಿರ ಮಠದ ಪೂಜ್ಯಶ್ರೀ ಜ. ಗುರುಸಿದ್ಧ ರಾಜಯೋಗೇಂದ್ರ ಮಹಾಸ್ವಾಮಿಗಳು, ಧಾರವಾಡ ಮುರಘಾಮಠದ ಪೂಜ್ಯಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಗಂಗಾವತಿ ಕಲ್ಮಠದ  ಪೂಜ್ಯಶ್ರೀ ಡಾ. ಕೊಟ್ಟೂರ ಮಹಾಸ್ವಾಮಿಗಳು, ಉಪ್ಪಿನ ಬೆಟಗೇರಿಯ ಮೂರುಸಾವಿರಮಠದ ಪೂಜ್ಯಶ್ರೀ ಕುಮಾರ ವಿರುಪಾಕ್ಷ ಮಹಾಸ್ವಾಮಿಗಳು,  ಬಳಗಾನೂರ ಶ್ರೀಮಠದ ಪೂಜ್ಯಶ್ರೀ ಶಿವಶಾಂತವೀರ ಶರಣರು,  ಚನ್ನಮ್ಮ ಕಿತ್ತೂರಿನ ಪೂಜ್ಯಶ್ರೀ ಪಂಚಾಕ್ಷರ ಮಹಾಸ್ವಾಮಿಗಳು, ಮುದ್ದೇಬಿಹಾಳದ ಪೂಜ್ಯಶ್ರೀ ಡಾ. ಲಾಲಲಿಂಗೇಶ್ವರ ಶರಣರು, ಅಫಜಲಪೂರಿನ  ಪೂಜ್ಯಶ್ರೀ ವಿರುಪಾಕ್ಷಿ ದೇವರು, ಯಡ್ರಾಮಿಯ ಪೂಜ್ಯಶ್ರೀ ಪ್ರಣವಲಿಂಗ ಮಹಾಸ್ವಾಮಿಗಳು, ಲಿಂಗಸೂರಿನ ಪೂಜ್ಯಶ್ರೀ ಶಿವಶರಣೆ ನಂದೀಶ್ವರಿ ಅಮ್ಮನವರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತ ಸಮೂಹ ಮಹಾರಥೋತ್ಸವದ ಅದ್ದೂರಿ ಕ್ಷಣಗಳನ್ನು ಕಣ್ತುಂಬಿಕೊಂಡರು.
WhatsApp Group Join Now
Telegram Group Join Now
Share This Article