ಭವಾನಿ ಪ್ರಸಾದ್ ಮತ್ತಿತರರು ಭರತ್ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ

Ravi Talawar
ಭವಾನಿ ಪ್ರಸಾದ್ ಮತ್ತಿತರರು ಭರತ್ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ
WhatsApp Group Join Now
Telegram Group Join Now
ಬಳ್ಳಾರಿ, ಜೂ.15: ಯಾವುದೇ ಪಕ್ಷವು ಹರಿಯುವ ನದಿಯಿದ್ದಂತೆ, ಹೊಸ ಹೊಸ ಕಾರ್ಯಕರ್ತರ ಸೇರ್ಪಡೆ ಸಹಜ ಪ್ರಕ್ರಿಯೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಶನಿವಾರ ನಗರದ 14ನೇ ವಾರ್ಡಿನ ಯುವ ಮುಖಂಡ ಭವಾನಿ ಪ್ರಸಾದ್ ಮತ್ತು ಸ್ನೇಹಿತರು ಬಿಜೆಪಿ ಪಕ್ಷವನ್ನು ತೊರೆದು ನಗರ ಶಾಸಕ ಭರತ್ ರೆಡ್ಡಿ ಮೇಲಿನ ವಿಶ್ವಾಸದಿಂದ  ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು  ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪಕ್ಷಕ್ಕೆ ಹೊಸಬರು ಸೇರ್ಪಡೆಯಾದರೆ ಬಲ ಹೆಚ್ಚುತ್ತದೆ, ಅವರು ಬೇಡ ಇವರು ಬೇಡ ಎಂದರೆ ರಾಜಕೀಯ ಮಾಡಲಾಗದು ಎಂದು ಅಭಿಪ್ರಾಯಪಟ್ಟರು.
ಭವಾನಿ ಪ್ರಸಾದ್ ಮೂಲತಹ ನನ್ನ ಬೆಂಬಲಿಗರು, ಆದರೆ ಮಧ್ಯದಲ್ಲಿ ಬೇರೆ ದಾರಿ ಹಿಡಿದಿದ್ದರು, ಈಗ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ, ಪಕ್ಷ ಹಾಗೂ ನನ್ನ ಮೇಲೆ ಅವರು ಮತ್ತವರ ಬೆಂಬಲಿಗರು ಇಟ್ಟಿರುವ ಭರವಸೆ ಹುಸಿ ಮಾಡಲಾರೆ, ಅವರೆಲ್ಲರ ಬೆಂಬಲಕ್ಕೆ ನಾನು ಸದಾ ಇರುವೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ, ಹಿಂದುಳಿದವರ, ದಲಿತರ ಹಾಗೂ ಸರ್ವ ಜನಾಂಗದವರ ಹಿತ ಕಾಪಾಡುವ ಪಕ್ಷ ಎಂದು ಹೇಳಿದ ಅವರು, ಬಳ್ಳಾರಿಯ ಅಭಿವೃದ್ಧಿಯೇ ನನ್ನ ಕನಸು, ಕಾರ್ಯಕರ್ತರನ್ನೆಲ್ಲ ಜೊತೆಗೂಡಿಸಿಕೊಂಡು ಹೋಗುವುದೇ ನನ್ನ ಧ್ಯೇಯ ಎಂದರು.
ಈ ಸಂದರ್ಭ ಮಹಾನಗರ ಪಾಲಿಕೆಯ ಸದಸ್ಯರಾದ ಮಿಂಚು ಸೀನಾ, ಎಂ.ಪ್ರಭಂಜನಕುಮಾರ್, ಜಬ್ಬಾರ್, ಮಾಜಿ ಮೇಯರ್ ನಾಗಮ್ಮ, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ಹೊನ್ನಪ್ಪ, ಹಗರಿ ಗೋವಿಂದ, ಮಂಜುಳಾ, ಚಂಪಾ ಚವ್ಹಾಣ್, ರಾಕಿ, ಥಿಯೇಟರ್ ಶಿವು, ರಘು, ಕಪ್ಪೆ ಶಿವು ಹಾಗೂ ಸ್ಥಳೀಯ ಮುಖಂಡರಾದ ಭವಾನಿ ಪ್ರಸಾದ್, ತಿರುಪಾಲ್ ರೆಡ್ಡಿ, ವೆಂಕಟೇಶ ಬಿ.ಆರ್, ಅಂಜಿ, ರಘು, ನಾಗರಾಜು, ಶಂಕರ್, ರಮೇಶ್, ಕೌಶಿಕ್, ಉಪೇಂದ್ರ, ಸಾಯಿನಾಥ್, ಶಕ್ತಿಲ್, 12ನೇ ವಾರ್ಡಿನ ಡೋಣೆಪ್ಪ,ಬಸವರಾಜ, ಅನಿಲ್, ರಂಜಿತ್ ಸೇರಿದಂತೆ ಹಲವರು ಹಾಜರಿದ್ದರು.
WhatsApp Group Join Now
Telegram Group Join Now
Share This Article