ಬಳ್ಳಾರಿ,ಜೂನ್.16: ಜಿಲ್ಲೆಯಸಿರುಗುಪ್ಪ ತಾಲ್ಲೂಕಿನ ದರೂರು ಗ್ರಾಮದಲ್ಲಿರುವ ಶ್ರೀ ವೀರಭದ್ರಸ್ವಾಮಿ ಪುಣ್ಯ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪುನಃ ಚಾಲನೆ
ನೀಡಲಾಗಿದೆ.
ದರುರು ವೀರಭದ್ರ ಸ್ವರ ಸ್ವಾಮಿ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ಗೌಡ ಪತ್ರಿಕಾ ಪ್ರಕಟಣೆ ನೀಡಿ, ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಆರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 81 ಅಡಿಗಳ ಎತ್ತರದ ರಾಜಗೋಪುರ, 47 ಅಡಿಗಳ ಎತ್ತರದ ಈಶಾನ್ಯ ಗೋಪುರ ಮತ್ತು 31 ಶಿಲಾ ಮಂಟಪಗಳ ನಿರ್ಮಾಣ ಕಾರ್ಯವು ಕಳೆದ ಎರಡು ವರ್ಷಗಳಿಂದ ನಡೆಯುತ್ತಿದ್ದು, ಕಳೆದ ವರ್ಷ ಸೆಪ್ಟೆಂಬರ್ತಿಂಗಳ ಅಂತಕ್ಕೆ 1.80 ಕೋಟಿ ರೂ.ಗಳ ಕಾಮಗಾರಿ ಪೂರ್ಣಗೊಂಡಿರುತ್ತದೆ.
2024ರ ಸೆ.1ರಿಂದಹಣಕಾಸಿನ ತೊಂದರೆಯಿಂದ ಅಭಿವೃದ್ಧಿಕಾಮಗಾರಿಗಳು ಸ್ಥಗಿತವಾಗಿದ್ದವು.ಇತ್ತೀಚೆಗೆ ಶ್ರೀ ವೀರಭದ್ರ ಸ್ವಾಮಿಯಭಕ್ತಾಧಿಗಳು ನೀಡಿರುವ ಕಾಣಿಕೆಯಿಂದಸುಮಾರು 32 ಲಕ್ಷ ರೂ.ಗಳ ಮೌಲ್ಯದಶಿಲಾಬಂಡೆಗಳನ್ನು ಚಿಕ್ಕಬಳ್ಳಾಪುರದಿಂದ8 ಲಾರಿಗಳಲ್ಲಿ ತರಿಸಲಾಗಿತ್ತು. ಇಂದು(ಜೂ.14ರಂದು) ಶ್ರೀ ವೀರಭದ್ರ ಸ್ವಾಮಿಪುಣ್ಯ ಕ್ಷೇತ್ರದ ವಿವಿಧ ಕಾಮಗಾ-
ರಿಗಳ ನಿರ್ಮಾಣದ ಶಿಲ್ಪಿಗಳುಮುರುಡೇಶ್ವರದಿಂದ ಆಗಮಿಸಿದ್ದು, ದೇವಸ್ಥಾನದ ಕಾಮಗಾರಿಯಲ್ಲಿ ಮಗ್ನರಾಗಿದ್ದಾರೆ.