ಬಳ್ಳಾರಿ ಜೂ 15: ಸಿರುಗುಪ್ಪ ನಗರದ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಮಾಜಿ ಶಾಸಕರಾದ ಎಂ ಎಸ್ ಸೋಮಲಿಂಗಪ್ಪ ಅವರ ನೇತೃತ್ವದಲ್ಲಿ ಹಾಗೂ ಮಂಡಲ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ವಿಕಸಿತ ಭಾರತ ಸಂಕಲ್ಪಸಭೆ, ಮೋದಿಯವರ ೧೧ನೇ ವ?ದ ಅವಧಿಯ ಜನಪರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಭೆ ನಡೆಸಲಾಯಿತು. ಪ್ರತಿ ಶಕ್ತಿ ಕೇಂದ್ರಗಳಲ್ಲಿ ಪರಿಸರ ದಿನಾಚರಣೆಯನ್ನು ಮತ್ತು ಯೋಗ ದಿನಾಚರಣೆಯನ್ನು ಹಾಗೂ ಸಂವಿಧಾನ ದಿನ(ಎಮರ್ಜೆನ್ಸಿ) ಸಭೆಗಳನ್ನು ಮಾಡಬೇಕೆಂದು, ಈ ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಅರುಣ ಅವರು ಮತ್ತು ಕಾರ್ಯಾಲಯದ ಕಾರ್ಯದರ್ಶಿಯಾದ ಶರಣು ಅವರು ತಿಳಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಇಬ್ರಾಂಪುರ ವೀರನಗೌಡರು, ಜಿಲ್ಲೆಯ ಯುವ ಮೋರ್ಚಾ ಅಧ್ಯಕ್ಷರಾದ ಎಂ.ಎಸ್ ಸಿದ್ದಪ್ಪ, ದರಪ್ಪನಾಯಕ, ಶಿವರಾಮ ಗೌಡರು, ದೇಶನೂರು ಹುಲಗಪ್ಪನವರು, ನಾಗೇಶಪ್ಪ, ಕಾಜಾ ಸಾಬ್, ರಾಮರಾಜ, ಮಲ್ಲಿಕಾರ್ಜುನ, ಬೆಳಗಲ್ ಬಸವರಾಜ, ಫಕೀರಯ್ಯ, ಹೆಚ್ ಶೇಕಪ್ಪ ,ಶಂಕ್ರಪ್ಪ, ಶೇಖರ ಗೌಡ, ಹೊನ್ನಪ್ಪ, ರಾಜಶೇಖರ ಗೌಡ ,ವೀರೇಶ್ ಗೌಡ, ನಾಗಪ್ಪ ಹೆಚ್ಚಿನ ಸಂಖ್ಯೆಯಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸಿದ್ದರು.