“ವಿಮಾನ ಪತನ: ಕೇಂದ್ರ ಸರ್ಕಾರವು ಸತ್ತವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಿ “

Pratibha Boi
“ವಿಮಾನ ಪತನ: ಕೇಂದ್ರ ಸರ್ಕಾರವು ಸತ್ತವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಿ “
WhatsApp Group Join Now
Telegram Group Join Now
ಬಳ್ಳಾರಿ,ಜೂ.೧4: ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ  ಪ್ರವಾಶ್ ಘೋಷ್ ಅವರು ಅಹಮದಾಬಾದ್ ಅಂತರರಾಷ್ಟಿçÃಯ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ವಿನಾಶಕಾರಿ ವಿಮಾನ ಅಪಘಾತದಿಂದ ನೂರಾರು ಮಂದಿ ಸಾವಿಗೀಡಾದ್ದರ ಬಗ್ಗೆ ನೀಡಿದ ಹೇಳಿಕೆಯಲ್ಲಿ ಗಾಢ ವೇದನೆ ಮತ್ತು ವ್ಯಥೆಯನ್ನು ವ್ಯಕ್ತಪಡಿಸಿದ್ದಾರೆ.
ಭಾರತೀಯ ರೈಲ್ವೆ ಹಾಗೂ ಇತರ ಸೇವಾ ಕ್ಷೇತ್ರಗಳಂತೆಯೇ, ವಿಮಾನಯಾನ ಕ್ಷೇತ್ರವನ್ನು ಸಹ ಏಕಸ್ವಾಮ್ಯ ಸಂಸ್ಥೆಗಳಿಗೆ ಹಸ್ತಾಂತರಿಸುವ ಖಾಸಗೀಕರಣದ ಈ ಯುಗದಲ್ಲಿ, ನಿರ್ವಹಣೆಯ ಕೊರತೆ ಮತ್ತು ಅಪ್ಪಟ ನಿರ್ಲಕ್ಷö್ಯದ ಕಾರಣದಿಂದಾಗಿ ವಿಮಾನಯಾನವೂ ಅಪಘಾತಗಳಿಗೆ ಈಡಾಗುವ ಸ್ಥಿತಿಗೆ ತಲುಪಿದೆ ಎಂದು ಅವರು ತಿಳಿಸಿದ್ದಾರೆ.
ಈ ವಿನಾಶಕಾರಿ ಅಪಘಾತದ ಕಾರಣಗಳನ್ನು ಕಂಡುಹಿಡಿಯಲು ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕು ಮತ್ತು ಇದಕ್ಕೆ ಟಾಟಾ ಸಮೂಹ ಮತ್ತು ಡಿಜಿಸಿಎ (ವಿಮಾನಯಾನ ನಿಯಂತ್ರಣ ಪ್ರಾಧಿಕಾರ) ಜವಾಬ್ದಾರರಾಗಿರಬೇಕು. ಅಪರಾಧಿಗಳೆಂದು ಗುರುತಿಸಲ್ಪಟ್ಟ ಎಲ್ಲರಿಗೂ ನಿದರ್ಶನೀಯ ಶಿಕ್ಷೆ ವಿಧಿಸಬೇಕು ಎಂದೂ ಅವರು ಒತ್ತಿಹೇಳಿದ್ದಾರೆ.
ಅನೇಕ ಜನರ ಸಾವಿಗೆ ಯಾವುದೇ ಪರಿಹಾರವು ಸಾಕಾಗುವುದಿಲ್ಲವಾದರೂ, ವಿಮಾನಯಾನ ಸಂಸ್ಥೆಗಳು ಮತ್ತು ಕೇಂದ್ರ ಸರ್ಕಾರವು ಸತ್ತವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸಹ ಅವರು ಹೇಳಿದ್ದಾರೆ.
WhatsApp Group Join Now
Telegram Group Join Now
Share This Article