ಪತ್ರಕರ್ತರ ಸಂಘದ  ನೂತನ ಪದಾಧಿಕಾರಿಗಳ ನೇಮಕ

Ravi Talawar
ಪತ್ರಕರ್ತರ ಸಂಘದ  ನೂತನ ಪದಾಧಿಕಾರಿಗಳ ನೇಮಕ
WhatsApp Group Join Now
Telegram Group Join Now
ಯಮಕನಮರಡಿ:-ಕರ್ನಾಟಕ ಪತ್ರಕರ್ತರ ಸಂಘದ ಹುಕ್ಕೇರಿ ತಾಲೂಕ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಬುಧವಾರ ದಿನಾಂಕ :11 -೦6- 2025 ರಂದು ಬೆಳಗಾವಿ ಜಿಲ್ಲೆಯ  ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮ್ ಗ್ರಾಮದ ಮಹಿಳಾ ಸ್ವಧಾರ ಆಶ್ರಯ ಗೃಹದಲ್ಲಿ ಜರುಗಿತು.
ಕರ್ನಾಟಕ ಪತ್ರಕರ್ತರ ಸಂಘದ ಹುಕ್ಕೇರಿ ತಾಲೂಕ ಘಟಕದ ಗೌರವ ಅಧ್ಯಕ್ಷರಾಗಿ ಕಿರಣ ಚೌಗಲಾ ಅಧ್ಯಕ್ಷರಾಗಿ  ರವೀಂದ್ರ ಜಿಂಡ್ರಾಳಿ, ಉಪಾಧ್ಯಕ್ಷರಾಗಿ ನಂದಕಿಶೋರ್ ಗೌಡರ, ಎ.ಎಮ್.ಕರ್ನಾಚಿ ,ಎ.ವೈ.ಸೋನ್ಯಾಗೋಳ ಪ್ರಧಾನ ಕಾರ್ಯದರ್ಶಿಗಳಾಗಿ, ಕುಶಾ  ಬಿ ನಾಗನೂರಿ ಕಾರ್ಯದರ್ಶಿಗಳಾಗಿ, ನೀಲಕಂಠ ಭೂಮಣ್ಣವರ ಸಂಘಟನಾ ಕಾರ್ಯದರ್ಶಿಗಳಾಗಿ, ರಮೇಶ ಬಾಗೇವಾಡಿ ಸಂಚಾಲಕರಾಗಿ, ನಿರಂಜನ ಶಿರೂರು ಖಜಾಂಚಿಗಳಾಗಿ ಹಾಗೂ ಸದಸ್ಯರಾಗಿ ನೀಲೇಶ ಜಗಜಂಪಿ, ನವೀನ ಸೊಲ್ಲಾಪೂರೆ, ಚೇತನ ಕುಲಕರ್ಣಿ,ಶಶಿಕಾಂತ ನಿಪ್ಪಾಣಿಕರ,ಉಮಾ ಕುಂಬಾರ,ಲವ ನಾಗನೂರಿ, ದೀಪಕ್ ನಾಡಗೌಡ ಆಯ್ಕೆಯಾದರು.
ನೂತನವಾಗಿ ಆಯ್ಕೆಗೊಂಡ ಎಲ್ಲ ಪದಾಧಿಕಾರಿಗಳಿಗೆ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಮುರುಗೇಶ ಶಿವಪೂಜಿ ಅಭಿನಂದಿಸಿದ್ದಾರೆ.ಇದೇ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾಗಿ ಆಯ್ಕೆಯಾದ ಕಿರಣ ಚೌಗಲಾ ಅವರು ಮಾತನಾಡಿ ಸರಕಾರದ ವತಿಯಿಂದ ಗ್ರಾಮೀಣ ಪತ್ರಕರ್ತರ ಬಸ್ ಪಾಸುಗಳನ್ನು ವಿತರಿಸುವುದು ಹಾಗೂ ಪತ್ರಕರ್ತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದು ಹಾಗೂ ಹುಕ್ಕೇರಿ ತಾಲೂಕಿನ ಕರ್ನಾಟಕ ಪತ್ರಕರ್ತರ ಸಂಘಕ್ಕೆ ಪತ್ರಕರ್ತರ ಭವನ ನಿರ್ಮಾಣಕ್ಕೆ ಸಹಾಯ ನೀಡುವುದು ಮುಂತಾದ ವಿಷಯಗಳ ಕುರಿತು ಮಾತನಾಡಿದರು. ಈ ಸಂಧರ್ಭ ದಲ್ಲಿ ದ್ರಾಕ್ಷಾಯಣಿ ಮಠಪತಿ.ಮಂದಾಕಿನಿ ಹಟ್ಟಿ. ಸುಂಗಧಾ ಮೂಕಾಶಿ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article