ಮನದ ಮಾಲಿನ್ಯ ತೊಲಗಿಸುವ ಕೆಲಸ ಇಂದಿನ ತುರ್ತು ಅಗತ್ಯವಾಗಿದೆ: ಚಂದ್ರಕಾAತ್ ವಡ್ಡು 

Ravi Talawar
ಮನದ ಮಾಲಿನ್ಯ ತೊಲಗಿಸುವ ಕೆಲಸ ಇಂದಿನ ತುರ್ತು ಅಗತ್ಯವಾಗಿದೆ: ಚಂದ್ರಕಾAತ್ ವಡ್ಡು 
WhatsApp Group Join Now
Telegram Group Join Now
ಬಳ್ಳಾರಿ,ಜೂ.೦9: ಪರಿಸರ ಮಾಲಿನ್ಯದ ಬಗ್ಗೆ ನಾವೆಲ್ಲರೂ ಮಾತನಾಡುತ್ತಿದ್ದೇವೆ. ಆದರೆ ಮಾಲಿನ್ಯ ಎಂಬುದು ಕೇವಲ ಪ್ರಕೃತಿಯನ್ನಾವರಿಸಿಕೊಂಡಿರುವ ಸಂಗತಿಯಲ್ಲ. ಬದಲಿಗೆ ರಾಜಕೀಯ, ಸಾಮಾಜಿಕ, ಕೌಟುಂಬಿಕ, ಸ್ನೇಹ, ವೃತ್ತಿ ಹೀಗೆ ಬದುಕಿನ ಬಹುತೇಕ ಮಲಿನಗೊಂಡ ಸಂದರ್ಭದಲ್ಲಿ ನಾವಿದ್ದೇವೆ. ಈ ಎಲ್ಲಾ ಪರಿಸರ ನಾಶದ ಮೂಲವಿರುವುದು ನಾಗರಿಕ ಮನುಷ್ಯನ ಮನಸ್ಸಿನಲ್ಲಿ. ಸ್ವಾರ್ಥ, ಲೋಭ, ಲಾಲಸೆ, ನಿಷ್ಕರುಣೆ, ತೋರಿಕೆ, ಸಮಯ ಸಾಧಕತನ ತುಂಬಿಕೊAಡಿರುವ ಮನಸ್ಸುಗಳನ್ನು ನಿಭಾಯಿಸುವ, ನಿರ್ಮಲಗೊಳಿಸುವ ನಿಟ್ಟಿನಲ್ಲಿ ನಾವು ಗಂಭೀರವಾಗಿ ಯೋಚಿಸಬೇಕಿದೆ ಎಂದು ಖ್ಯಾತ ಬರಹಗಾರ ಹಾಗೂ ಅಂಕಣಕಾರ ಚಂದ್ರಕಾAತ್‌ವಡ್ಡು ತಿಳಿಸಿದರು.
ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯಿಂದ ಡಾ|| ಜೋಳದರಾಶಿ ದೊಡ್ಡನಗೌಡ ರಂಗಮAದಿರದಲ್ಲಿ ನಡೆಯುತ್ತಿರುವ ೯ನೇ ಬಳ್ಳಾರಿ ಸಾಂಸ್ಕೃತಿಕ ಜನೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾಲಿನ್ಯದ ವಿರುದ್ಧವಷ್ಟೇ ಅಲ್ಲ ಜೊತೆ ಜೊತೆಯಲ್ಲಿ ಮನದ ಮಾಲಿನ್ಯದ ವಿರುದ್ಧ ಯುದ್ಧ ಕೂಡಬೇಕಿದೆ. ನಮ್ಮ ಪ್ರಚಲಿತ ರಾಜಕೀಯ, ಸಂಸ್ಕೃತಿ, ಸಮುದಾಯಗಳಿಗೆ ವೈಚಾರಿಕ ನೆಲೆಯಲ್ಲಿ ಪರಿಹಾರೋಪಾಯಗಳನ್ನು ಕಂಡುಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ಸಮಾಜದಲ್ಲಿ ಮಲಿನಗೊಂಡ ಪರಿಸರವನ್ನು ಶುಚಿಗೊಳಿಸುವ ಕಾರ್ಯವನ್ನು ಎಲ್ಲರೂ ಸೇರಿ ಮಾಡಬೇಕಿದೆ. ಮನದ ಮಾಲಿನ್ಯ ತೊಲಗಿಸುವ ಕೆಲಸ ವ್ಯಕ್ತಿಗತ ನೆಲೆಯಲ್ಲೂ ಆಗಬೇಕಿದೆ. ಇದು ಕಾರ್ಯಗತವಾದರೆ ಕೇವಲ ಪರಿಸರ ಮಾಲಿನ್ಯವಷ್ಟೇ ಅಲ್ಲ ಎಲ್ಲಾ ಬಗೆಯ ಮಾಲಿನ್ಯಗಳನ್ನು ತೊಲಗಿಸಬಹುದು, ನಿರ್ಮೂಲನೆಗೊಳಿಸಬಹುದು. ಆವಿಷ್ಕಾರ ಎಂಬುದು ತುಂಬಾ ಅರ್ಥಪೂರ್ಣವಾದ ಪದ. ಆದಿಮಾನವನಿಂದ ಆಧುನಿಕ ಮಾನವನವರೆಗೆ ಬೆಳವಣಿಗೆಯ ಪ್ರತಿಯೊಂದು ಹೆಜ್ಜೆಯನ್ನು ಪ್ರಭಾವಿಸಿರುವ ಸಂಗತಿ. ವಿಕಾಸದ ಹಾದಿಯನ್ನು ತೆರೆದಿಟ್ಟದ್ದು ಆವಿಷ್ಕಾರ. ಇಂತಹ ಆವಿಷ್ಕಾರದ ಹೆಸರಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲು ಹಾಗೂ ಆಶಯ ನುಡಿ ಮಾತನಾಡಲು ಅವಕಾಶ ಕೊಟ್ಟಿದ್ದಕ್ಕೆ ತಮಗೆಲ್ಲರಿಗೂ ಧನ್ಯವಾದಗಳು” ಎಂದು ಹೇಳಿದರು.
ಐಎಂಎ-ಕೆಪಿಎಸ್‌ಎಸ್‌ನ ಅಧ್ಯಕ್ಷ ಡಾ||ಮಧುಸೂದನ್ ಕಾರಿಗನೂರು ಸೂಕ್ತಿ ಮತ್ತು ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಾ, “ಈ ಸೂಕ್ತಿ ಮತ್ತು ಛಾಯಾಚಿತ್ರ ಉದ್ಘಾಟನೆ ಮಾಡಲು ಅವಕಾಶ ಮಾಡಿಕೊಟ್ಟಿರುವ ಎಲ್ಲಾ ಕಲಾಚೇತನಗಳಿಗೆ, ಹಿರಿಯರಿಗೆ, ಸಮಾಜಮುಖಿ ಮನಸ್ಸುಗಳಿಗೆ ನನ್ನ ಅನಂತ ನಮನಗಳು. ಇಂದಿನ ವೇಗದ ಜೀವನದಲ್ಲಿ ಕಲೆಗೆ ಪ್ರಾಮುಖ್ಯತೆ ಕೊಡುವುದು ಕಡಿಮೆಯಾಗುತ್ತಿದೆ. ಕಲೆಗಳು ಕಾಣೆಯಾಗುತ್ತಿರುವ ಈ ದಿನಗಳಲ್ಲಿ ನಮ್ಮ ಜೀವನಕ್ಕೆ ದಾರಿದೀಪವಾಗುವ ಸೂಕ್ತಿಗಳನ್ನು ಪ್ರದರ್ಶನ ಮಾಡುವ ಈ ಕಾರ್ಯಕ್ರಮಗಳು ಅದ್ಭುತ. ಈ ರೀತಿಯ ಕಾರ್ಯಕ್ರಮ ನಾನು ನನ್ನ ಜೀವನದಲ್ಲಿ ಮೊದಲನೇ ಬಾರಿ ನೋಡುತ್ತಿರುವುದು” ಎಂದು ಹೇಳಿದರು.
ರಂಗ ನಿರ್ದೇಶಕರು, ನೀನಾಸಂ ಕಲಾವಿದ ಭಾನುಪ್ರಕಾಶ್ ಕಡಗತ್ತೂರು ಆಶಯ ನುಡಿಗಳನ್ನಾಡಿದರು. ಎಐಎಂಎಸ್‌ಎಸ್‌ನ ಜಿಲ್ಲಾಧ್ಯಕ್ಷರಾಗಿರುವ ಶ್ರೀಮತಿ ಈಶ್ವರಿ ಕೆ.ಎಂ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಮಾಜಿಕ ಹೋರಾಟಗಾರರಾದ ಡಾ. ಪ್ರಮೋದ್ ಎನ್. ಅವರು ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.
ನಂತರ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶ್ರೀ ದೊಡ್ಡಬಸಪ್ಪ ಗವಾಯಿ ಅವರಿಂದ ಸಂಗೀತ ರಸಾಯನ, ಇಂದ್ರಾಣಿ ನಾಟ್ಯಕಲಾ ಟ್ರಸ್ಟ್ ವತಿಯಿಂದ ಸಮೂಹ ನೃತ್ಯ, ವಿಜಯನಗರದ ಆವಿಷ್ಕಾರ ವೇದಿಕೆಯಿಂದ ಪ್ರಗತಿಪರ ಗೀತೆಗಳು, ಸುಜಾತ ಕಲಾ ಟ್ರಸ್ಟ್ ವತಿಯಿಂದ ನೃತ್ಯ ರೂಪಕ, ಡಾ. ರಾಮ್ ಕಿರಣ್ ಅವರಿಂದ ವಾದ್ಯ ಸಂಗೀತ ಕೊನೆಯದಾಗಿ ಭಾನುಪ್ರಕಾಶ್ ಕಡಗತ್ತೂರು ನಿರ್ದೇಶನದ ಸಸಓ ಹೆನ್ರಿ ಅವರ ಕಥೆ ಆಧಾರಿತ ‘ಕೊನೆ ಎಲೆ’ ಎಂಬ ನಾಟಕ ಪ್ರಸ್ತುತಗೊಂಡಿತು. ವಿವಿಧ ತಂಡಗಳಿAದ ಪ್ರಸ್ತುತಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ತುಂಬಾ ಮನೋಜ್ಞವಾಗಿದ್ದವು.
ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಜನತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ರಸಸ್ವಾದ ಮಾಡುತ್ತಾ ಸಾಂಸ್ಕೃತಿಕ ವಾತಾವರಣ ಕಲುಷಿತಗೊಳ್ಳುತ್ತಿರುವ ಇಂದಿನ ದಿನಮಾನಗಳಲ್ಲಿ ಮನಸ್ಸನ್ನು ಮುದಗೊಳಿಸಿ ಹದಗೊಳಿಸುವ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು, ಅದಕ್ಕೆ ನಾವೆಲ್ಲರೂ ಬೆಂಬಲವಾಗಿರುತ್ತೇವೆ ಎಂದು ಆಶಿಸಿದರು.
2 Attachments • Scanned by Gmail

WhatsApp Group Join Now
Telegram Group Join Now
Share This Article