ಪರಿಶುದ್ಧ ಗಾಳಿಗಾಗಿ ಪರಿಸರ ಸಂರಕ್ಷಿಸಿ : ಚೇತನಾ ಪಾಟೀಲ

Ravi Talawar
ಪರಿಶುದ್ಧ ಗಾಳಿಗಾಗಿ ಪರಿಸರ ಸಂರಕ್ಷಿಸಿ : ಚೇತನಾ ಪಾಟೀಲ
WhatsApp Group Join Now
Telegram Group Join Now
ಅಥಣಿ : ಪರಿಸರವನ್ನು ನಾವು ರಕ್ಷಣೆ ಮಾಡಿದರೆ ಪರಿಸರ ನಮ್ಮೆಲ್ಲರನ್ನು ರಕ್ಷಣೆ ಮಾಡುತ್ತದೆ. ಭವಿಷ್ಯತ್ತಿನಲ್ಲಿ ಪರಿಶುದ್ಧ ಗಾಳಿಗಾಗಿ ಪ್ರತಿಯೊಬ್ಬರು ಪರಿಸರವನ್ನು ಸಂರಕ್ಷಿಸಬೇಕು. ಗಿಡ ಮರಗಳನ್ನು ಬೆಳೆಸುವ ಪರಿಪಾಠವನ್ನು ಶಾಲಾ ಮಕ್ಕಳಿಗೆ ರೂಢಿಸಬೇಕೆಂದು ಪಾಟೀಲ್ ಪಬ್ಲಿಕ್ ಶಾಲೆಯ ಮುಖ್ಯಶಿಕ್ಷಕಿ ಚೇತನಾ ಪಾಟೀಲ ಹೇಳಿದರು.
ತಾಲೂಕಿನ ಸತ್ತಿ ಗ್ರಾಮದ ಪಾಟೀಲ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಶ್ರೀ ಬಾಳಕೃಷ್ಣ ಮಹಾರಾಜ ಸಂಸ್ಕೃತ ಪಾಠ ಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಜರುಗಿದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅವರು ಮಾತನಾಡುತ್ತಾ ನಮ್ಮ ಶಿಕ್ಷಣ ಸಂಸ್ಥೆಯ  ಆವರಣದಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಅನೇಕ ಪಕ್ಷಿಗಳು ಇಲ್ಲಿ ವಾಸಮಾಡುತ್ತಿವೆ. ಪರಿಶುದ್ಧ ವಾತಾವರಣ ನಿರ್ಮಾಣವಾಗಿದೆ. ಶಾಲಾ ಮಕ್ಕಳು ಶಾಲಾ ಆವರಣದಲ್ಲಿ ಹಾಗೂ ತಮ್ಮ ಮನೆಯ ಆವರಣದಲ್ಲಿ ಮತ್ತು ತೋಟದಲ್ಲಿ ಗಿಡಮರಗಳನ್ನು ನೆಟ್ಟು ಬೆಳೆಸಬೇಕು. ಮುಂದಿನ ಪೀಳಿಗೆಗಾಗಿ ಅಮೂಲ್ಯವಾದ ಪರಿಸರವನ್ನು ಕೊಡುಗೆಯಾಗಿ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.  ಈ ಸಂದರ್ಭದಲ್ಲಿ ಸುಜಾತಾ ಕಶೆಟ್ಟಿ, ರೇಷ್ಮಾ ಜಂಗ್ಲಿ, ರೇವತಿ ಪಾಟೀಲ, ಸೀಮಾ ತೊದಲಬಾಗಿ  ಸುಧಾ ಪಾಟೀಲ, ದಾನಮ್ಮ ಗುಡ್ಡಾಪುರ, ರಂಜಿತಾ ನಾಯಕ, ಸಂಗೀತಾ ನಾಯಕ, ಗೌರಿ ಗುಡ್ಡಪುರ, ಸಾಧಿಕ್ವಾ ಜಮಾಲಭಾಯಿ, ತಂಜಿಲಾ ಜಮಾಲಭಾಯಿ, ಸವಿತಾ ಎನ್, ಸುನೀತಾ  ಗಂಗಪ್ಪನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article