ಗೋದಾವರಿ ಸಕ್ಕರೆ ಕಾರ್ಖಾನೆ ಮಜದೂರ ಯೂನಿಯನ್ ವತಿಯಿಂದ ಕಾರ್ಮಿಕ ದಿನಾಚರಣೆ.
ಮಹಾಲಿಂಗಪುರ: ಯಾವುದೇ ಕಾರ್ಖಾನೆ ಅಭಿವೃದ್ಧಿ ಹೊಂದಬೇಕಾದರೆ ಕಾರ್ಮಿಕರ ಶ್ರಮದ ಪಾತ್ರ ಪ್ರಮುಖವಾಗಿದ್ದು,, ತಮ್ಮ ಪಾಲಿನ ಹಕ್ಕನ್ನು ಪಡೆದುಕ್ಕೊಳ್ಳಲು ಅವರು ಸದಾ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಸಮೀರವಾಡಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ ಹೇಳಿದರು.
ಸಮೀಪದ ಸೈದಾಪುರ – ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆ ಮಜದೂರ ಯೂನಿಯನ್ ವತಿಯಿಂದ ರವಿವಾರ ನಡೆದ ಕಾರ್ಮಿಕರ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು. ಕಾರ್ಖಾನೆ ಇತಿಹಾಸದಲ್ಲಿ ಕಾರ್ಮಿಕರು ಹಾಗೂ ಆಡಳಿತ ಮಂಡಳಿ ಮಧ್ಯೆದಲ್ಲಿ ಪರಸ್ಪರ ಸೌಹಾರ್ದ ಇರುವುದು ಮೆಚ್ಚುವಂತಹ ಸಂಗತಿಯಾಗಿದ್ದು, ಭವಿ?ದಲ್ಲಿಯೂ ಇದು ಮುಂದುವರಿಯಲಿ ಎಂದು ಆಶಿಸಿದರು.
ರಾಜ್ಯ ಸಕ್ಕರೆ ಕಾರ್ಮಿಕರ ಮಹಾಮಂಡಳದ ಅಧ್ಯಕ್ಷ ಬಿ.ನಾಗರಾಜ, ಜಿಲ್ಲಾ ಕಾರ್ಮಿಕ ರಮೇಶ ಸುಂಬಡ ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ನಿವೃತ್ತಿ ಆಗಲಿರುವ ಸಕ್ಕರೆ ಕಾರ್ಖಾನೆ ಮಜದೂರ ಯೂನಿಯನ್ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಯೂನಿಯನ್ ಕಾರ್ಯಾಧ್ಯಕ್ಷ ಬಿ.ವಿ.ಮೇಲಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ರಂಗನಗೌಡ ಪಾಟೀಲ, ಕಾರ್ಖಾನೆ ಅಧಿಕಾರಿ ಎಂ. ರಾಮಚಂದ್ರ, ಬಸವರಾಜ ಭದ್ರಶೆಟ್ಟಿ, ಡಿ.ಎನ್. ಕೃ?ಗೌಡ, ಪ್ರಕಾಶ ದೆಗಾಂವಿ, ಅಸ್ಲಂ ರಮಜಾನ್ ಪೆಂಡಾರಿ, ಈರಣಗೌಡ ಪಾಟೀಲ ಇದ್ದರು. ಇದಕ್ಕೂ ಮುನ್ನ ಕಾರ್ಖಾನೆ ಗೇಟ್ನಿಂದ ವೇದಿಕೆಯವರೆಗೆ ಕಾರ್ಮಿಕರು ಹಾಗೂ ಸಿಬ್ಬಂದಿ ಮೆರವಣಿಗೆ ನಡೆಸಿದರು.