ಬೆಂಗಳೂರು, ಮೇ 28: ಕರ್ನಾಟಕದಾದ್ಯಂತ ಮುಂಗಾರುಅಬ್ಬರ ತುಸು ಹೆಚ್ಚಾಗಿದೆ. 7 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೊಡಗು, ಹಾಸನ, ವಿಜಯಪುರಕ್ಕೆ ಆರೆಂಜ್ ಅಲರ್ಟ್, ಬೀದರ್, ಧಾರವಾಡ, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ಚಾಮರಾಜನಗರ, ದಾವಣಗೆರೆ, ಮೈಸೂರು, ವಿಜಯನಗರಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜೂನ್ 3ರಿಂದ ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಲಿದೆ.
ಮುಲ್ಕಿ, ಮಾಣಿ, ಉಪ್ಪಿನಂಗಡಿ, ಪಣಂಬೂರು, ಅಫ್ಝಲ್ಪುರ್, ಕಾರ್ಕಳ, ಕೋಟಾ, ಪುತ್ತೂರು, ಮಂಗಳೂರು, ಬೆಳ್ತಂಗಡಿಯಲ್ಲಿ ಭಾರಿ ಮಳೆಯಾಗಿದೆ. ಮಂಗಳೂರು, ಭಾಗಮಂಡಲ, ಆಗುಂಬೆ, ನಾಪೋಕ್ಲು, ಸೋಮವಾರಪೇಟೆ, ಸಿದ್ದಾಪುರ, ಗಂಗಾಪುರ, ಧರ್ಮಸ್ಥಳದಲ್ಲಿ ಕೂಡ ಹೆಚ್ಚಿನ ಮಳೆ ಸುರಿದಿದೆ. ಗೇರುಸೊಪ್ಪ, ಮಾನ್ವಿ, ಬುದ್ದೇಬಿಹಾಳ, ಕಾರವಾರ, ಹೊನ್ನಾವರ, ಕೊಪ್ಪ, ಶೃಂಗೇರಿ, ಕಮ್ಮರಡಿ, ಕೆಂಭಾವಿ, ಬಾಳೆಹೊನ್ನೂರು, ಗೋಕರ್ಣ, ಎಚ್ಡಿ ಕೋಟೆ, ಕುಮಟಾ, ಹಾರಂಗಿ, ಯಡ್ರಾಮಿ, ಬಸವನಬಾಗೇವಾಡಿ, ಕುಶಾಲನಗರ, ಬಂಡೀಪುರ, ತ್ಯಾಗರ್ತಿ, ಅಂಕೋಲಾ, ಅರಕಲಗೂಡು, ಸಿಂಧನೂರು, ಕೂಡಲಸಂಗಮ, ಕೃಷ್ಣರಾಜಪೇಟೆ, ಕುರ್ಡಿ, ಇಂಡಿ, ಅಥಣಿ, ಅಜ್ಜಂಪುರ, ಗುಂಡ್ಲುಪೇಟೆ, ಮೈಸೂರು, ಹುನಗುಂದ, ಗಂಗಾವತಿ, ದೇವರಹಿಪ್ಪರಗಿ, ಕುಣಿಗಲ್, ಸಂಕೇಶ್ವರ, ಇಳಕಲ್, ಮುನಿರಾಬಾದ್, ಚಿತ್ತಾಪುರ, ಮುನಿರಾಬಾದ್, ಯಲ್ಲಾಪುರದಲ್ಲಿ ಮಳೆಯಾಗಿದೆ.