ರಾಜ್ಯದ ಯುಜನತೆಗೆ ಉದ್ಯೋಗವನ್ನು ಒದಗಿಸುವುದೆ ರಾಜ್ಯ ಸರ್ಕಾರದ ಮುಖ್ಯ ಉದ್ದೇಶವಾಗಿದೆ:ಸಚಿವ ಡಾ.ಶರಣಪ್ರಕಾಶ್ ಪಾಟೀಲ್ 

Ravi Talawar
ರಾಜ್ಯದ ಯುಜನತೆಗೆ ಉದ್ಯೋಗವನ್ನು ಒದಗಿಸುವುದೆ ರಾಜ್ಯ ಸರ್ಕಾರದ ಮುಖ್ಯ ಉದ್ದೇಶವಾಗಿದೆ:ಸಚಿವ ಡಾ.ಶರಣಪ್ರಕಾಶ್ ಪಾಟೀಲ್ 
WhatsApp Group Join Now
Telegram Group Join Now
ಗದಗ:ರಾಜ್ಯದಲ್ಲಿರುವ ಯುವಜನತೆಗೆ ಕೌಶಲ್ಯ ಅಭಿವೃದ್ಧಿ ಗೊಳಿಸುವ ತರಬೇತಿ ನೀಡಿ ಅವರಿಗೆ ಉದ್ಯೋಗ ಒದಗಿಸಿವುದೆ ರಾಜ್ಯ ಸರ್ಕಾರದ ಮುಖ್ಯ ಉದ್ದೇಶ ವಾಗಿದೆ ಎಂದು ಕರ್ನಾಟಕ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ದೀ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಹೇಳಿದರು.
 ನಗರದ ಕೆ ಎಚ್ ಪಾಟೀಲ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಒಟ್ಟು 120 ಸರ್ಕಾರಿ ಐಟಿಐ ಕಾಲೇಜಿನಲ್ಲಿರುವ ಉಪಕರಣಗಳು ಸೇರಿದಂತೆ ಕಟ್ಟಡಗಳನ್ನು ನಿರ್ಮಿಸಿ ಮೇಲ್ದರ್ಜೆಗೆ ಏರಿಸಲಾಸಲಾಗುವುದು  1400 ಕೋಟಿ ರೂ ಪ್ರಸ್ತಾವಣೆಯನ್ನು ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ ಕೆಜಿಡಿಟಿಐ ಅಭಿವೃದ್ಧಿ, 1500 ಕೋಟಿ ಪ್ರಸ್ತಾವಣೆಗೆ ಕಳುಹಿಸಲಾಗಿದೆ ವಿಶೇಷವಾಗಿ ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ನೀಡುವ ಯುವನಿಧಿ ಗ್ಯಾರಂಟಿಯಲ್ಲಿ 287000 ಪದವಿ ಡಿಪ್ಲೋಮಾ ಮಾಡಿದವರು ನೊಂದಣಿಯಾಗಿದ್ದಾರೆ 190000 ಜನರಿಗೆ ಯುವನಿಧಿ ಗ್ಯಾರಂಟಿ ಯೋಜನೆಯಡಿ ತಿಂಗಳಿಗೆ 3 ಸಾವಿರ ರೂಗಳಂತೆಯನ್ನುನೀಡಲಾಗುತ್ತಿದೆ ಹಾಗು ನೊಂದಣಿಯಾದವರಿಗೆ ಹೆಚ್ಚುವರಿ ಉದ್ಯೋಗ ಕೌಶಲ್ಯವನ್ನು ನೀಡಲಾಗುತ್ತಿದೆ.
 ಕೌಶಲ್ಯ ಅಭಿವೃದ್ದೀ ಇಲಾಖೆಯಡಿ ಬರುವ ಐಟಿಐ ಕಾಲೇಜುಗಳು ಕೆಜಿಡಿಟಿಐ, ಸರ್ಕಾರಿ ಟೂರ್ ಆ್ಯಂಡ್ ಟ್ರೇಡಿಂಗ್ ಸೇಂಟರ್ ಇವಾಗ 33 ಇವೆ ಈ ವರ್ಷ ಇನ್ನು 8 ಸೇರಿಸಿ ಮೇಲ್ದರ್ಜೆಗೆ ಏರಿಸಲಾಸಲಾಗುತ್ತಿದೆ ಅದರ ಜೊತೆಗೆ ಹೆಚ್ಚುವರಿ ಕೋರ್ಸ ಗಳನ್ನು ನೀಡಲಾಗುತ್ತದೆ ಯುವಕರಿಗೆ ಯಾವ ರೀತಿ ಉದ್ಯೋಗ ಕೊಡಿಸಬಹುದು ಎನ್ನುವುದರ ಕಡೆಗೆ ಸರ್ಕಾರ ಗಮನ ಸರಿಸಿದೆ ಹಾಗಾಗಿ ಬೆಳಗಾವಿ ಕಲಬುರಗಿ ಗದಗ ಸೇಡಂ ಬೆಂಗಳೂರಿನಲ್ಲಿ ಸೇರಿದಂತೆ ರಾಜ್ಯದಲ್ಲಿ ಅನೇಕ ಉದ್ಯೋಗ ಮೇಳಗಳನ್ನು ಮಾಡಲಾಗಿದೆ.
 ಯಾವುದೇ ಕಂಪನಿಗಳು ಮುಂದೆ ಬಂದು ತಮಗೆ ಬೇಕಾದ ಅಭ್ಯರ್ಥಿಗಳ ಸಂಖ್ಯೆ ಮತ್ತು ಅವರಿಗೆ ಇರಬೇಕಾದ ಕೌಶಲ್ಯ ವನ್ನು ತಿಳಿಸಿದರೆ,ಉದ್ಯೋಗ ವನ್ನು ಅರಿಸಿಬರುವವರಿಗೆ ತಗಲುವ ತರಬೇತಿ ವೆಚ್ಚವನ್ನು ಸರ್ಕಾರ ನೀಡಿ ಇಂಡಸ್ರೀಯಲದ ಲಿಂಕೆಜ್ ಮಾಡಲಾಗುತ್ತದೆ.
WhatsApp Group Join Now
Telegram Group Join Now
Share This Article