ಬಳ್ಳಾರಿ ಮೇ 22: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಧುನಿಕ ಭಾರತ ನಿರ್ಮಾಣ ಅಡಿಗಲ್ಲು ಹಾಕಿದ ಭಾರತದ ಡಿಜಿಟಲ್ ಕ್ರಾಂತಿಯ ಹರಿಕಾರ ಮಾಜಿ ಪ್ರಧಾನಿ ಧಿವಗಂತ ರಾಜೀವ್ ಗಾಂಧಿ ಅವರ ಭಾವ ಚಿತ್ರಕ್ಕೆ ಪುಷ್ಪಗಳನ್ನು ಹಾಕುವ ಮೂಲಕ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಲ್ಕಂಬ ಪಂಪಾಪತಿ, ದಿವಂಗತ ರಾಜೀವ್ ಗಾಂಧಿ ಅವರು ದೇಶಕ್ಕೆ ಡಿಜಿಟಲ್ ಮಾಧ್ಯಮವನ್ನು ಪರಿಚಯಿಸಿ ಇಡೀ ದೇಶವನ್ನು ಡಿಜಿಟಲೀಕರಣ ಗೊಳಿಸಿದರು. ವಿರೋಧ ಪಕ್ಷದವರು ವಿರೋಧ ಪಕ್ಷದವರು ಎಷ್ಟೇ ವಿರೋಧಿಸಿದರು ದೇಶದ ವ್ಯವಸ್ಥೆಯನ್ನು ಕಂಪ್ಯೂಟರಿಕರಣ ಗೊಳಿಸಿದರು. ಅಷ್ಟೇ ಅಲ್ಲದೆ ಹಲವಾರು ವಿದ್ಯಾಸಂಸ್ಥೆಗಳು ವಿಶ್ವವಿದ್ಯಾಲಯಗಳು ಕಾರ್ಖಾನೆಗಳು ಸೇರಿದಂತೆ ಹಲವಾರು ಸಾರ್ವಜನಿಕರಿಗೆ ಅನುಕೂಲವಾಗುವ ಸಂಸ್ಥೆಗಳನ್ನು ಸ್ಥಾಪಿಸಿದರು, ಅಷ್ಟೇ ಅಲ್ಲದೆ ಅತ್ಯಂತ ಮುಖ್ಯವಾಗಿ ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೊಳಿಸಿ ಅಧಿಕಾರ ವಿಕೇಂದ್ರೀಕರಣದ ಪಿತಾಮಹರಿಸಿಕೊಂಡರು ಎಂದು ಅವರ ಸೇವೆಯನ್ನು ಸ್ಮರಿಸಿದರು.
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಕಲ್ಲುಕಂಭ ಪಂಪಾಪತಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾದ ಹುಮಯೂನ್ ಖಾನ್, ಕಾರ್ಯಾಧ್ಯಕ್ಷರಾದ ಭೋಯಾಪಾಟಿ ವಿಷ್ಣುವರ್ಧನ್, ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಚಿದಾನಂದಪ್ಪ, ಮುಂಚೂಣಿ ಘಟಕಗಳ ಅಧ್ಯಕ್ಷರಾದ ಎಂ.ಎಸ್.ಮಂಜುಳ, ಎರುಕುಲ ಸ್ವಾಮಿ, ಕನೇಕಲ್ ಮಾಬುಸಾಬ್, ಜೋಗಿನ ಚಂದ್ರಪ್ಪ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಪರ್ವಿನ್ ಭಾನು, ಸಂಗನಕಲ್ ವಿಜಯ ಕುಮಾರ್, ಲಿಂಗರಾಜು, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.