ಧಾರವಾಡ : ಎಸಸಿ- ಎಸಟಿ ಹಿಂದುಳಿದ ವರ್ಗಗಳ ಕಡುಬಡವ ಮಹಿಳೆಯರಿಗೆ, ಹೊಲಿಗೆ ಯಂತ್ರಗಳ ವಿತರಣೆ ಮಾಡಿದ ಬಳಿಕ ಮಾತನಾಡಿದ ಅವರು, ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಸಾಮಾಜಿಕ ನ್ಯಾಯದಡಿ ಹೊಲಿಗೆ ಯಂತ್ರಗಳನ್ನು ನೀಡುತ್ತಿದ್ದು, ಇದರ ಸದುಪಯೋಗ ಪಡೆದು , ತಾವು ಕಿರು ಉದ್ಯೋಗ ಸೃಷ್ಟಿ ಮಾಡಿಕೊಂಡು ಜೀವನ ಕಟ್ಟಿಕೊಳ್ಳಬೇಕು ಎಂದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅನುನದಾನದಡಿ ಪಾಲಿಕೆ ಸದಸ್ಯರಾದ ಈರೇಶ ಅಂಚಟಗೇರಿ ಅವರ ಸತತ ಪ್ರಯತ್ನ ಫಲವಾಗಿ , ವಾರ್ಡ ಸಂಖ್ಯೆ 3ರಲ್ಲಿ ಬರುವಂತಹ ಮಹಾನಗರ ಪಾಲಿಕೆ ಮಹಾಪೌರರು ರಾಮಣ್ಣ ಬಡಿಗೇರ ಅವರ ನೇತೃತ್ವದಲ್ಲಿ ಮಹಾತ್ಮ ಬಸವೇಶ್ವರ ನಗರದ ಶಿವಾಲಯದ ಯೋಗ ಭವನದಲ್ಲಿ , ಎಸಸಿ- ಎಸಟಿ ಹಿಂದುಳಿದ ವರ್ಗಗಳ ಕಡುಬಡವ ಮಹಿಳೆಯರಿಗೆ, ಹೊಲಿಗೆ ಯಂತ್ರಗಳ ವಿತರಣೆ ಮಾಡಿದ ಸಂದರ್ಭದಲ್ಲಿ ಮಾತನಾಡಿದರು.
ಮಾಜಿಮಹಾಪೌರರು ಈರೇಶ ಅಂಚಟಗೇರಿ ಮಾತನಾಡಿ, ಪ್ರಥಮ ಹಂತದ 2022-23 ರ ಸಾಲಿನ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನ ನೀಡಲಾಗಿದೆ. ಮುಂಬರುವ ದಿನಮಾನಗಳಲ್ಲಿ ಇನ್ನು ಹೆಚ್ಚಿನ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ನೀಡಲಾಗುವದು.
ಅಭಿವೃದ್ಧಿ ಪೂರಕವಾಗಿ ಬಿಜೆಪಿ ಆಡಳಿತದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸಾಮಾಜಿಕ ನ್ಯಾಯದಡಿ ಕಾರ್ಯ ನಿರ್ವಹಿಸುತ್ತಿದ್ದು, ಇನ್ನು ಹೆಚ್ಚಿನ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಲಿದ್ದು ಎಲ್ಲ ನಾಗರಿಕರ ಸಹಕಾರದೊಂದಿಗೆ ಮುಂಬರುವ ದಿನಮಾನಗಳಲ್ಲಿ ಕಾರ್ಯಗತವಾಗಲಿವೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಶಿವಾಲಯದ ಯೋಗ ಭವನಕ್ಕೆ60 ಕುರ್ಚಿಗಳನ್ನು ನೀಡಲಾಯಿತು.
ಮತ್ತು ಮಹಿಳೆಯರಿಗೆ, ಹೊಲಿಗೆ ಯಂತ್ರಗಳ ವಿತರಣೆ ಮಾಡಿದರು
ಕಾರ್ಯಕ್ರಮದಲ್ಲಿ ಮಹಾಪೌರರು ರಾಮಣ್ಣ ಬಡಿಗೇರ, ಮಾಜಿಮಹಾಪೌರರು ಈರೇಶ ಅಂಚಟಗೇರಿ ,
ಡಾ. ಎಸ.ಆರ.ರಾಮನಗೌಡರ , ಮಂಜು ಬಟ್ಟೆಣ್ಣವರ, ಬಸವರಾಜ ಕೆಂಚನಳ್ಳಿ ,ರಾಜೇಶ್ವರಿ ಅಳಗವಾಡಿ, ಅಶೋಕ ಶೆಟ್ಟರ , ಬಸು ಬಾಳಗಿ , ಪಾಲಿಕೆ ಸಹಾ