ಬೈಲಹೊಂಗಲ. ತಾಲೂಕಿನ ಮೇಕಲಮರಡಿ ಗ್ರಾಮದಲ್ಲಿ ಯುದ್ಧ ಭೂಮಿಯಿಂದ ತಾಯ್ನಾಡಿಗೆ ಮರಳಿದ ಮಲ್ಲೇಶ್ ನಾಗಪ್ಪ ಅರಕೇರಿ ದಂಪತಿಗಳನ್ನು ಗ್ರಾಮದ ಗುರು ಹಿರಿಯರಿಂದ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀ ಶಿವಾನಂದ ಹಿರೇಮಠ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ನಿಂಗಪ್ಪ ಅರಕೇರಿ, ಗ್ರಾಪಂ ಸದಸ್ಯರಾದ ರಾಜು ಹಣ್ಣಿಕೇರಿ, ಚಂದ್ರಯ್ಯ ಹಿರೇಮಠ, ನಿವೃತ್ತ ಶಿಕ್ಷಕರಾದ ವಾಯ್ ಆರ್ ಗುಡಿ, ಬಸವಣ್ಣೆಪ್ಪ ಮದನಭಾವಿ, ಸೋಮನಿಂಗ ಮದನಭಾವಿ, ಮಹಾಂತೇಶ್ ಕಂಡ್ಯಯ್ಯನವರ, ರಾಜು ಯರಡಾಲ, ಲಕ್ಷ್ಮಣ್ ಬೂದ್ನೂರ ಗ್ರಾಮದ ಸಮಸ್ತ ಯುವಕ ಮಿತ್ರರು ಹಾಗೂ ಹಿರಿಯರು ಉಪಸ್ಥಿತರಿದ್ದರು.