ಪಾಕ್‌ನ ನೂರ್​ಖಾನ್ ವಾಯುನೆಲೆಯನ್ನು ಭಾರತದ ಮಿಸೈಲ್ಸ್‌ ಧ್ವಂಸ ಮಾಡಿವೆ: ಪಾಕ್‌ ಪ್ರಧಾನಿ ಷರೀಫ್

Ravi Talawar
ಪಾಕ್‌ನ ನೂರ್​ಖಾನ್ ವಾಯುನೆಲೆಯನ್ನು ಭಾರತದ ಮಿಸೈಲ್ಸ್‌ ಧ್ವಂಸ ಮಾಡಿವೆ: ಪಾಕ್‌ ಪ್ರಧಾನಿ ಷರೀಫ್
WhatsApp Group Join Now
Telegram Group Join Now

ಇಸ್ಲಾಮಾಬಾದ್‌: “ಮೇ 10ರಂದು ಬೆಳಗಿನಜಾವ 2:30ರ ಸುಮಾರಿಗೆ, ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ನನಗೆ ಕರೆ ಮಾಡಿ ಭಾರತದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ನೂರ್ ಖಾನ್ ವಾಯುನೆಲೆ ಮತ್ತು ಇತರ ಪ್ರದೇಶಗಳನ್ನು ಹೊಡೆದಿರುಳಿಸಿದ್ದಾಗಿ ಪಾಕ್​ ಪ್ರಧಾನಿ ಪ್ರಧಾನಿ ಶೆಹಬಾಜ್ ಷರೀಫ್, ಮಾಹಿತಿ ನೀಡಿದರು.

ದಾಳಿಯ ವೇಳೆ ನಮ್ಮ ವಾಯುಪಡೆಯು ದೇಶವನ್ನು ಉಳಿಸಲು ಸ್ಥಳೀಯ ತಂತ್ರಜ್ಞಾನ ಮತ್ತು ಚೀನೀ ಜೆಟ್‌ಗಳನ್ನು ಬಳಸಿತ್ತು. ಆದರೆ, ಭಾರತದ ಕ್ಷಿಪಣಿಗಳು ತಮ್ಮ ಗುರಿ ಸಾಧಿಸಿ ಹೊಡೆದುರುಳಿಸಿವೆ ಎಂದು ದೃಢಪಡಿಸಿದ್ದಾರೆ” ಎಂದು ಹೇಳಿದ್ದಾರೆ.

ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದು, “ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು, ಜನರಲ್ ಅಸಿಮ್ ಮುನೀರ್ ಅವರು ಬೆಳಗಿನ ಜಾವ 2:30ಕ್ಕೆ ತಮಗೆ ಕರೆ ಮಾಡಿ ಭಾರತ ನೂರ್ ಖಾನ್ ವಾಯುನೆಲೆ ಮತ್ತು ಇತರ ಹಲವಾರು ಸ್ಥಳಗಳ ಮೇಲೆ ಬಾಂಬ್ ದಾಳಿ ನಡೆಸಿದೆ ಎಂದು ತಿಳಿಸಿದ್ದರು ಎಂದು ಒಪ್ಪಿಕೊಂಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

WhatsApp Group Join Now
Telegram Group Join Now
Share This Article