ಜಮಖಂಡಿ: ನಗರದ ತಾಲೂಕಾ ಆಡಳಿತ ಸೌಧದಲ್ಲಿ ನಡೆದ ಜನಸ್ಪಂದನ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡದೆ ಕಾಟಾಚಾರಕ್ಕೆ ಎಂಬಂತೆ ಕಾರ್ಯಕ್ರಮ ಮಾಡಿ ಮುಗಿಸಿದ್ದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನಲ್ಲಿ ಹಲವಾರು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡದೆ ಅಧಿಕಾರಿಗಳು ಜನಸ್ಪಂದನ ಮೌಲ್ಯವನ್ನೆ ಹಾಳುಗೆಡುವುತಿದ್ದಾರೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲೆ ಪರಿಹರಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜನಸ್ಪಂದನ ಕಾರ್ಯಕ್ರಮದ ಕುರಿತು ಪತ್ರಿಕೆಗಳ ಮೂಲಕ ಪ್ರಕಟಣೆ ನೀಡದೆ, ಕಾರ್ಯಕ್ರಮದಿಂದ ಪತ್ರಕರ್ತರನ್ನೂ ಹೊರಗಿಟ್ಟು ಜನಸ್ಪಂದನ ಕಾರ್ಯಕ್ರಮ ಮಾಡಿದ್ದು ಸಂಶಯಕ್ಕೆ ಎಡೆಮಾಡಿದೆ.
ತಮ್ಮ ಕಾರ್ಯಕ್ಕೆ ಅಚಾನಕ್ಕಾಗಿ ಬಂದ ರೈತರೊಬ್ಬರು ಅರ್ಜಿಯನ್ನು ನೀಡಿದ್ದಾರೆ ಜನಸ್ಪಂದನದಲ್ಲಿ ಒಟ್ಟು ಬೆರಳೆನಿಯಷ್ಟು ಅರ್ಜಿಗಳು ಮಾತ್ರ ನೀಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜನಸ್ಪಂದನ ಕಾರ್ಯಕ್ರಮದ ಕುರಿತು ಪತ್ರಕರ್ತರಿಗೆ ಮಾಹಿತಿ ನೋಟಿಸ್ ನೀಡಲಾಗಿತ್ತು ಆದರೆ ನಮ್ಮ ಸಿಬ್ಬಂದಿಗಳು ಅದನ್ನು ಮುಟ್ಟಿಸಿಲ್ಲ ಈ ಕುರಿತು ಸರಿಪಡಿಸಿಕೊಳ್ಳುತ್ತೆವೆ ಮುಂದಿನ ಜನಸ್ಪಂದನಕ್ಕೆ ಎಲ್ಲರಿಗೂ ಮಾಹಿತಿ ನೀಡಲಾಗುವುದು ಎಂದು ತಹಸೀಲ್ದಾರ ಸದಾಶಿವ ಮಕ್ಕೋಜಿ ತಿಳಿಸಿದರು.