ಕರವೇ ನೂತನ ಪದಾಧಿಕಾರಿಗಳ ಆಯ್ಕೆ:ಕೆಂಪಣ್ಣ ಚೌಕಶಿ 

Ravi Talawar
ಕರವೇ ನೂತನ ಪದಾಧಿಕಾರಿಗಳ ಆಯ್ಕೆ:ಕೆಂಪಣ್ಣ ಚೌಕಶಿ 
WhatsApp Group Join Now
Telegram Group Join Now

ಘಟಪ್ರಭಾ.ದಿನಾಂಕ  5-5- 2025 ರಂದು ಧುಪದಾಳ ಪ್ರವಾಸಿ ಮಂದಿರದಲ್ಲಿ ಕನ್ನಡ ರಕ್ಷಣಾ ವೇದಿಕೆ ನೂತನ ಪದಾಧಿಕಾರಿಗಳನ್ನು ಆಯ್ಕೆಯನ್ನು  ಕನ್ನಡ ರಕ್ಷಣಾ ವೇದಿಕೆ ರಾಜ್ಯದ್ಯಕ್ಷರಾದ ಡಾ.ಕೆಂಪಣ್ಣ ಚೌಕಶಿ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು. ರಾಜ್ಯ ಕಾರ್ಯದರ್ಶಿಯನ್ನಾಗಿ  ರಾಜಕುಮಾರ ಸಾಹುಕಾರ್ ಹೊರಮನಿ, ಯಾದಗಿರಿ ಜಿಲ್ಲಾಧ್ಯಕ್ಷರನ್ನಾಗಿ ನಾಗಪ್ಪ ಹೂನಗೇರ, ಮೂಡಲಗಿ ತಾಲೂಕು ಗೌರವ ಅಧ್ಯಕ್ಷರನ್ನಾಗಿ ಮಲ್ಲಿಕಾರ್ಜುನ ಅರಭಾವಿ, ಮೂಡಲಗಿ ತಾಲೂಕ ಉಸ್ತುವಾರಿ ಅಧ್ಯಕ್ಷರನ್ನಾಗಿ ರಾಘವೇಂದ್ರ ಕುಡ್ಡೆಮ್ಮಿ  ಅವರನ್ನು  ಆಯ್ಕೆ ಮಾಡಿ ನಾಡು ನುಡಿ ನೆಲ ಜಲ ಭಾಷೆಗೆ ಕಂಕಣಬದ್ದರಾಗಿ ಕಾರ್ಯವನ್ನು ಮಾಡಲು ರಾಜ್ಯಾಧ್ಯಕ್ಷ ಡಾ. ಕೆಂಪಣ್ಣ ಚೌಕಶಿ ಆದೇಶಿಸಿದರು.          ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾದ ಮಾರುತಿ ಚೌಕಾಶಿ ,ಗೋಕಾಕ ತಾಲೂಕ ಉಪಾಧ್ಯಕ್ಷರಾದ ಬಸವರಾಜ ಹುಬ್ಬಳ್ಳಿ ,ಹುಕ್ಕೇರಿ ತಾಲೂಕ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಶಿಂದೆ, ಮೂಡಲಗಿ ತಾಲೂಕ ಉಪಾಧ್ಯಕ್ಷರಾದ ಶಿವರಾಜ ಚಿಗಡೊಳ್ಳಿ ,ಬೆಳಗಾವಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶಶಿಧರ ಚೌಕಶಿ, ವಿಠ್ಠಲ್ ಬೆಳಗಲಿ ,ಶಂಕರ ದುರದುಂಡಿ, ಕಾಶಪ್ಪ ನಿಂಗನ್ನವರ, ಬಾಳು ಶಿಂದಿಕುರಬೇಟ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article