ಜಮಖಂಡಿ ನಗರದಲ್ಲಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀ ಸಿದ್ದು ನ್ಯಾಮಗೌಡ ಸೌಹಾರ್ದ ಸಹಕಾರಿ ಸಂಘವು ತನ್ನ ಅಧೀನದಲ್ಲಿ ಇದೇ ದಿನಾಂಕ ೦೮.೦೫.೨೦೨೫ ಗುರುವಾರದಂದು ಎ.ಪಿ.ಎಮ್.ಸಿಯಲ್ಲಿ ತನ್ನ ರಸಗೊಬ್ಬರ, ಬೀಜ ಮತ್ತು ಕೀಟನಾಶಕ ಮಾರಾಟ ಮಳಿಗೆಯನ್ನು ಹೊಸದಾಗಿ ಪ್ರಾರಂಭಿಸಲಿದೆ ಎಂದು ಸಹಕಾರಿ ಅಧ್ಯಕ್ಷರು ಮತ್ತು ಮಾಜಿ ಶಾಸಕರು ಆದ ಶ್ರೀ ಆನಂದ ನ್ಯಾಮಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮ ಸಹಕಾರಿಯ ಕಳೆದ ವರ್ಷದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಹೇಳಿರುವಂತೆ ಈ ಮಳಿಗೆ ಪ್ರಾರಂಭಿಸಲಾಗುತ್ತಿದ್ದು ರೈತರಿಗೆ ಯೋಗ್ಯ ಬೆಲೆಯಲ್ಲಿ ಮತ್ತು ಶೀಘ್ರವಾಗಿ ರಸಗೊಬ್ಬರ ದೊರಕಿಸಿಕೊಡುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು ನಮ್ಮ ಸಹಕಾರಿ ಕಳೆದ ಐದು ವರ್ಷಗಳಲ್ಲಿ ವಿವಿಧ ಕಡೆ ಐದು ಶಾಖೆಗಳನ್ನು ಪ್ರಾರಂಭಿಸಿದ್ದು ಐದು ಶಾಖೆಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ ಸಹಕಾರಿಯ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ಅಂದರೆ ಕಳೆದ ಆರ್ಥಿಕ ವರ್ಷದಲ್ಲಿ ಅಂದಾಜು ಶೇ ೧೮% ರಷ್ಟು ಲಾಭಾಂಶವನ್ನು ಸಹಕಾರಿಯ ಸದಸ್ಯರುಗಳಿಗೆ ಹಂಚಲಾಗಿದೆ.
ಅಷ್ಟೇ ಅಲ್ಲದೇ ಪ್ರತಿಯೊಬ್ಬ ಶ್ರಮಜೀವಿಯ ಆರ್ಥಿಕ ಪ್ರಗತಿಗಾಗಿ ಶ್ರಮಬಿಂದು ಯೋಜನೆಯನ್ನು ನಾವು ಪ್ರಾರಂಭಿಸಿದ್ದು ಕೇವಲ ೬ ವರ್ಷಗಳಲ್ಲಿ ದ್ವಿಗುಣ ಹಣ ನೀಡುವ ಯೋಜನೆ ಇದಾಗಿದೆ. ಅಷ್ಟೇ ಅಲ್ಲದೇ ಠೇವಣಿದಾರರಿಗೂ ಉತ್ತಮ ದರದಲ್ಲಿ ಬಡ್ಡಿಯನ್ನು ಸಹ ನಮ್ಮ ಸಹಕಾರಿಯು ನೀಡುತಿದೆ. ನಮ್ಮ ಸಹಕಾರಿ ಸಂಘದ ಎಲ್ಲ ಶೇರುದಾರರ ವಿಶ್ವಾಸದಿಂದ ನಾವು ಈಗ ಈ ಹೊಸ ಮಳಿಗೆಯನ್ನು ಪ್ರಾರಂಭಿಸಿತ್ತಿದ್ದು ಜಮಖಂಡಿಯ ಮುತ್ತಿನಕಂತಿ ಮಠದ ಪ.ಪೂ.ಶ್ರೀ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಓಲೆಮಠದ ಪ.ಪೂ.ಶ್ರೀ ಆನಂದ ದೇವರು ಅವರ ದಿವ್ಯಸಾನಿಧ್ಯ ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.