ಅಂಬೇಡ್ಕರ್ ಅವರನ್ನು ಅವಮಾನ ಮಾಡುವುದು ಖಂಡನಾರ್ಹ: ಪೃಥ್ವಿರಾಜ್

Ravi Talawar
ಅಂಬೇಡ್ಕರ್ ಅವರನ್ನು ಅವಮಾನ ಮಾಡುವುದು ಖಂಡನಾರ್ಹ: ಪೃಥ್ವಿರಾಜ್
WhatsApp Group Join Now
Telegram Group Join Now
ಬಳ್ಳಾರಿ,ಮೇ.೦6.: ಅಂಬೇಡ್ಕರ್ ಬಗ್ಗೆ ಅವಹೇಳನ ಹೇಳಿಕೆ ಖಂಡಿಸಿ ಕರ್ನಾಟಕ ಸಮತ ಸೈನಿಕದಳ ಕಾರ್ಯಧ್ಯಕ್ಷ ಕೆ ಪೃಥ್ವಿರಾಜ್ ಖಂಡಿಸಿದ್ದಾರೆ.
ಶAಕರಾಚಾರ್ಯರ ಜಯಂತಿಯ ಸಂದರ್ಭದಲ್ಲಿ ನಿವೃತ ನ್ಯಾಯಮೂರ್ತಿಗಳಾದ ಎನ್ ಕುಮಾರ್ ಎಂಬುವವರು ಬೆಂಗಳೂರುನಲ್ಲಿ ಶುಕ್ರವಾರ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿದ್ದಾರೆ. ೧೩ ನೂರುವರ್ಷಗಳ ಹಿಂದೆ ಶಂಕರಾಚಾರ್ಯರು ಸಮಾನತೆ ಬಗ್ಗೆ ಪ್ರತಿಪಾದಿಸಿದರು ಆದಕಾರಣ ಇನ್ನು ಮುಂದೆ ಆದರೂ ಸಮಾನತೆ ವಿಚಾರ ಬಂದಾಗ ಅಂಬೇಡ್ಕರ್ ಬದಲಿಗೆ ಶಂಕರಾಚಾರ್ಯರ ಹೆಸರನ್ನು ಹೇಳಬೇಕು ಇಂದಿನ ಕಾಲದಲ್ಲಿ ಹಾದಿ ಬೀದಿಯಲ್ಲಿ ಹೋಗುವರೆಲ್ಲರೂ ಅಂಬೇಡ್ಕರ್ ಅವರ ಸಮಾನತೆ ಹೋರಾಟ ಕುರಿತು ಗುಣಗಾನ ಮಾಡುತ್ತಾರೆ ಎಂದು ಉದ್ದಟ್ಟತನದ ಹೇಳಿಕೆಯನ್ನು ಹೇಳಿರುತ್ತಾರೆ ಅಂಬೇಡ್ಕರ್ ಹೋರಾಟ ಬದುಕು ಅಪಾರ ಹೋರಾಟ ಸಾಧನಗಳನ್ನು ಅಸಾಮಾನ್ಯಗೊಳಿಸಿರುತ್ತಾರೆ ತಕ್ಷಣವೇ ಸರ್ಕಾರ ಕ್ರಮ ವಹಿಸಬೇಕು ಸಮಾನತೆಗಾಗಿ ೧೨ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆಗಾಗಿ ಬಸವಣ್ಣನವರು ಹೋರಾಟ ಮಾಡಿದ ಬದುಕು ದಾಖಲೆಗಳು ನಮ್ಮಲ್ಲಿವೆ ಅದೇ ರೀತಿಯಲ್ಲಿ ಸಮಾನತೆಗಾಗಿ ಯಾರೇ ಹೋರಾಟ ಮಾಡಿದರು ಸ್ವಾಗತ ಆದರೆ ಒಬ್ಬರನ್ನು ಹೊಗಳುವಾಗ  ಅಂಬೇಡ್ಕರ್ ಅವರನ್ನು ಅವಮಾನ ಮಾಡುವುದು ಖಂಡನಾರ್ಹ ಅಂಬೇಡ್ಕರ್ ಅವರ ಹೋರಾಟ ಸಮಾನತೆಗಳು ವಿಶ್ವವಿಖ್ಯಾತವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article