ಬಳ್ಳಾರಿ,ಮೇ.೦6: ಟ್ರೇಡಿಷನಲ್ ಶೊಟೊಕಾನ್ ಕರಾಟೆ ಅಕಾಡೆಮಿ ಕರ್ನಾಟಕ ಕರಾಟೆ ಪಟುಗಳು ಮೇ ೯ ರಿಂದ ೧೧ ರ ೨೦೨೫ ರವರೆಗೆ ಮಲೇಷಿಯಾ ದೇಶದ ಪಿರಾಕ್ ಸ್ಟೇಟ್ಸ್ ನ ಇಫೊ ನಗರದಲ್ಲಿ ನಡೆಯಲಿರುವ ೨೧ನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಭಾರತ ತಂಡದಿAದ ಪ್ರತಿನಿಧಿಸಲು ಕರಾಟೆ ಪಟುಗಳು ಭಾಗವಹಿಸಲಿದ್ದಾರೆ ಈಗಾಗಲೇ ಈ ಹಿಂದೆ ೨೦೧೯ ರಲ್ಲಿ ಭಾಗವಹಿಸಿ ಪದಕ ಪ್ರಶಸ್ತಿಯನ್ನು ಪಡೆದಿದ್ದರು ಈ ಬಾರಿಯೂ ಕೂಡ ನಮ್ಮ ಕರಾಟೆ ಪಟುಗಳು ಕಟಾ ಮತ್ತು ಕುಮಿತೆ ವಿಭಾಗದಲ್ಲಿ ಭಾಗವಹಿಸಲಿದ್ದಾರೆ ಎಂದು ಕರಾಟೆ ಅಕಾಡೆಮಿ ಮುಖ್ಯ ತರಬೇತುದಾರರಾದ ಕಟ್ಟೇಸ್ವಾಮಿ ತಿಳಿಸಿದ್ದಾರೆ.
ಕರಾಟೆ ಪಂದ್ಯಾವಳಿಯ ಕಟಾ ಮತ್ತು ಕುಮಿತೆ ವಿಭಾಗದಲ್ಲಿ ೧೪ ವರ್ಷದ ಒಳಗಿನ ವಯೋಮಿತಿಯಲ್ಲಿ ಡಿ ದನೀಷ್ ರೆಡ್ಡಿ, ಎಲ್ಲಾ ದೇವಾನ್ಷ್ ಮತ್ತು ಸಮರ್ಥ್ ಎಸ್ ಎಮ್ ಹಾಗೂ ೧೮ ವರ್ಷ ಮೆಲ್ಪಟ್ಟ ವಿಭಾಗದಲ್ಲಿ ತರಬೇತುದಾರರ ವಯೋಮಿತಿಯಲ್ಲಿ ಪ್ರಶಾಂತ್, ನಬಿ ಸಾಹೇಬ್. ಭಾಗವಹಿಸಲಿದ್ದಾರೆ ಎಂದು ಅಕಾಡಾಮಿಯ ಮುಖ್ಯ ಕರಾಟೆ ತರಬೇತುದಾರರಾದ ಕಟ್ಟೇಸ್ವಾಮಿ ತಂಡದ ಜೊತೆ ತೆರಳಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕರಾಟೆ ಕ್ರೀಡಾ ಪಟುಗಳಿಗೆ ಕರಾಟೆ ಅಕಾಡೆಮಿಯ ತಾಂತ್ರಿಕ ನಿರ್ದೇಶಕರಾದ ಸುಭಾಷ್ ಚಂದ್ರ ಮತ್ತು ಮಹನಗರ ಪಾಲಿಕೆ ಮಹಾ ಪೌರರಾದ ಮುಲ್ಲಂಗಿನAದಿಶ್ ಮತ್ತು ಸಮಾಜ ಸೇವಕರು ಕ್ರೀಡಾ ಪೋಷಕ ಜಿ ಕೆ ಗ್ರೂಪ್ ಅಪ್ ಕಂಪನಿ ಸಿಇಒ ಜಿ.ಕೆ.ಸ್ವಾಮಿ ಹಾಗು ಯುವ ಸಬಲೀಕರಣ ಹಾಗೂ ಕ್ರೀಡಾ ಇಇಲಾಖೆಯ ಸಹಾಯಕ ನಿರ್ದೇಶಕ ಕೆ.ಗ್ರೇಸಿ ಕನ್ನಡ ಪರ ಹೋರಾಟಗಾರರು ರಾಜ್ಯಧ್ಯಕ್ಷ ಪಿ.ಶೇಖರ್ ಮತ್ತು ಹೊಟೆಲ್ ರಾಯಲ್ ಪೊರ್ಟ ಮಾಲೀಕರಾದ ಆನಂದ ಪೋಲಾ ಜನ ಸೈನ್ಯ ರಾಜ್ಯಧ್ಯಕ್ಷರಾದ ಎರಿಸ್ವಾಮಿ.ಹಾಗೂ ಉದ್ಯಮಿಗಳು ಸಿಲಂಬಮ್ ಕ್ರೀಡಾ ಜಿಲ್ಲಾ ಅಧ್ಯಕ್ಷರಾದ ಚಂದ್ರಶೇಖರ್ ಮತ್ತು ಕರಾಟೆ ಅಕಾಡಾಮಿಯ ಕರಾಟೆ ತರಬೇತುದಾರರಾದ ಜಡೇಶ, ಹುಲುಗಣ್ಣ, ಪ್ರಸಾದ್ ಹನುಮಂತ, ಸಂತೋಷ ಕುಮಾರಸ್ವಾಮಿ, ಗಾದಿಲಿಂಗ, ನಾಗರಾಜ .ಹಾಗೂ ಬಳ್ಳಾರಿಯ ಕೆಲ ಕ್ರೀಡಾ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಕ್ರೀಡಾ ಪ್ರೇಮಿಗಳು ಅಭಿನಂದಿಸಿದ್ದಾರೆ.