ಹುಕ್ಕೇರಿ : ಸಾರ್ವಜನಿಕರು ಪರಸ್ಪರ ಸಹಕಾರದಿಂದ ನಡೆದಲ್ಲಿ ಸರಕಾರದ ಯೋಜನೆಗಳು ಸದ್ಬಳಕೆಯಾಗುವದರ ಜೊತೆ ಗ್ರಾಮಗಳ ಅಭಿವೃದ್ದಿಯಾಗಲು ಸಾಧ್ಯವೆಂದು ಶಾಸಕ ನಿಖಿಲ್ ಕತ್ತಿ ಹೇಳಿದರು.
ಅವರು ಸ್ಥಳಿಯ ಪಿಕಾರ್ಡ ಬ್ಯಾಂಕಿನಲ್ಲಿ ಆವರಣದಲ್ಲಿ ಸಾರ್ವಜನಿಕರ ಕುಂದುಕೊರತೆ ಸಮಸ್ಯೆಗಳನ್ನು ಆಲಿಸಿ ಸಮಸ್ಯೆಗಳ ಪರಿಹಾರಕ್ಕೆ ಸೂಚಿಸಿದರು.
ಬೆಣಿವಾಡ ಗ್ರಾಮದಲ್ಲಿ ರಸ್ತೆಯ ಮೇಲೆ ಆಕ್ರಮವಾಗಿ ಮನೆ ಕಟ್ಟಿರುವದನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಆದೇಶಿಸಿದರು.ಯಾದಗೂಡ ಗ್ರಾಮದ ಮುಗಳಿ ತೋಟದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಹಿನ್ನಲೆಯಲ್ಲಿ ಕೊಳವೆ ಭಾವಿ ಕೊರೆದು ಪಂಪ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಿದರು.ಬಡಕುಂದ್ರಿ ಹೊಳೆಮ್ಮದೇವಿ ದೇವಸ್ಥಾನದ ಆವರಣದಲ್ಲಿ ಕಾಂಕ್ರಿಟ್ ಹಾಕಲು ಮನವಿ ಸಲ್ಲಿಸಿದರು.
ವಿವಿಧ ಗ್ರಾಮಗಳ ಜನರ ಸಮಸ್ಯೆಗಳನ್ನು ಆಲಿಸಿದ ಶಾಸಕರು ಅಧಿಕಾರಿಗಳೊಂದಿಗೆ ಚರ್ಚೆಸಿ ತಹಶಿಲ್ದಾರ ಕಛೇರಿಯಲ್ಲಿ ವಿದ್ಯಾರ್ಥಿಗಳ ಮುಂದಿನ ವ್ಯಾಸಂಗಕ್ಕಾಗಿ ವಿವಿಧ ಪ್ರಮಾಣ ಪತ್ರಗಳನ್ನು ವಿಳಂಭಮಾಡದೆ ನೀಡಲು ಹಾಗೂ ಜನರ ಕುಂದುಕೊರೆತೆಗಳನ್ನು ಪರಿಹಾರಕ್ಕಾಗಿ ಅಧಿಕಾರಿಗಳಿಗೆ ಸೂಚಿಸಿದರು.
ಬಡಕುಂದ್ರಿ, ಹೊಸುರ, ಕಣಗಲಾ, ಬೆಳವಿ, ಮತ್ತಿತರ ಗ್ರಾಮದ ಜನರು ತಮ್ಮ ಬಡಕುಂದ್ರಿ, ಯರಗಟ್ಟಿ, ಯರನಾಳ, ಮದಮಕ್ಕನಾಳ, ಗೌಡವಾಡ, ಬಸ್ತವಾಡ, ಮದಿಹಳ್ಳಿ, ಬೆಣ್ಣಿವಾಡ, ಸುಲ್ತಾನಪೂರ, ಗ್ರಾಮಗಳ ಹಲವು ಬೇಡಿಕೆಗಳ ಇಡೇರಿಕೆಗಾಗಿ ಗ್ರಾಮಸ್ಥರು ಮನವಿ ಸಲ್ಲಿಸಿದರುವಿವಿಧ ಗ್ರಾಮಗಳ ಮುಖಂಡರಾದ ಸತ್ಯಪ್ಪಾ ನಾಯಿಕ, ಕಲಗೌಡ ಪಾಟೀಲ, ಮುನ್ನಾಪ ಅತ್ತಾರ, ಅಶೋಕ ಹಿರೆಕೋಡಿ, ಆನಂದ ಲಕ್ಕುಂಡಿ, ಎಚ್ ಎಲ್ ಪೂಜೇರಿ, ದುರದುಂಡಿ ಪಾಟೀಲ, ಗುರು ಕುಲಕರ್ಣಿ,ಶೀತಲ ಬ್ಯಾಳಿ, ಪರಗೌಡ ಪಾಟೀಲ, ಎಕೆ. ಪಾಟೀಲ, ಶಿವಗೌಡ ಪಾಟೀಲ, ರಾಜು ಮುನ್ನೋಳಿ, ಲಖಮಗೌಡ ಪಾಟೀಲ,ಡಿ.ಕೆ ಅವರಗೋಳ, ಭೀಮಗೌಡ ಗಿರಿಗೌಡನ್ನವರ, ಮಹಾನಿಂಗ ಸನದಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.