ಆಪ್‌ ಆಡಳಿತದಲ್ಲಿ ಹೊರ ದಬ್ಬಲ್ಪಟ್ಟಿದ್ದ ವಿಜೇಂದ್ರ ಗುಪ್ತಾ ಈಗ ದೆಹಲಿ ವಿಧಾನಸಭೆಯ ಸ್ಪೀಕರ್‌

Ravi Talawar
ಆಪ್‌ ಆಡಳಿತದಲ್ಲಿ ಹೊರ ದಬ್ಬಲ್ಪಟ್ಟಿದ್ದ ವಿಜೇಂದ್ರ ಗುಪ್ತಾ ಈಗ ದೆಹಲಿ ವಿಧಾನಸಭೆಯ ಸ್ಪೀಕರ್‌
WhatsApp Group Join Now
Telegram Group Join Now

ದೆಹಲಿ, ಫೆಬ್ರವರಿ 20: ಆಮ್ ಆದ್ಮಿ ಪಕ್ಷದ 10 ವರ್ಷಗಳ ಆಳ್ವಿಕೆಯಲ್ಲಿ ಬಿಜೆಪಿಯ ಹಿರಿಯ ನಾಯಕ ವಿಜೇಂದ್ರ ಗುಪ್ತಾ ಅವರನ್ನು ವಿಧಾನಸಭೆಯಿಂದ ಹೊರಹಾಕಲಾಗಿತ್ತು. ಈಗ ಪರಿಸ್ಥಿತಿ ಬದಲಾಗಿದ್ದು, 27 ವರ್ಷಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದ್ದು, ಗುಪ್ತಾ ಅವರನ್ನು ಸ್ಪೀಕರ್​ ಆಗಿ ಆಯ್ಕೆ ಮಾಡಲಾಗಿದೆ. ಮಾಜಿ ಸ್ಪೀಕರ್ ಮತ್ತು ಅರವಿಂದ್ ಕೇಜ್ರಿವಾಲ್ ಇಬ್ಬರೂ ಈಗ ವಿಧಾನಸಭೆಯ ಭಾಗವಾಗಿಲ್ಲ. 2015 ಮತ್ತು 2020 ರಲ್ಲಿ ಕೇಜ್ರಿವಾಲ್ ಅಲೆಯ ನಡುವೆ ವಿಜೇಂದರ್ ಗುಪ್ತಾ ಗೆದ್ದಿದ್ದರು, ದೆಹಲಿಯಲ್ಲಿ ಎಎಪಿ ಭಾರಿ ಬಹುಮತದೊಂದಿಗೆ ಆಗ ಗೆಲುವು ಸಾಧಿಸಿತ್ತು. ವಿಧಾನಸಭೆಯಲ್ಲಿ ನಡೆದ ಗದ್ದಲದ ಸಮಯದಲ್ಲಿ ಗುಪ್ತಾ ಅವರನ್ನು ಸದನದಿಂದ ಹೊರಹಾಕಲಾಗಿತ್ತು.

ಹಿಂದಿನ ದೆಹಲಿ ವಿಧಾನಸಭೆಯಲ್ಲಿ ವಿಜೇಂದರ್ ಗುಪ್ತಾ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿದ್ದರು. ಆಗಸ್ಟ್ 5, 2024 ರಂದು ವಿಜೇಂದ್ರ ಗುಪ್ತಾ ಅವರನ್ನು ಆಗಿನ ವಿರೋಧ ಪಕ್ಷ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡಲಾಯಿತು. ಆಮ್ ಆದ್ಮಿ ಪಕ್ಷದ ಸರ್ಕಾರದ ಅವಧಿಯಲ್ಲಿ, ವಿಜೇಂದ್ರ ಗುಪ್ತಾ ಅವರನ್ನು ಮಾರ್ಷಲ್‌ಗಳನ್ನು ಕರೆಸಿ  ಹೊರಹಾಕಲಾಯಿತು.

WhatsApp Group Join Now
Telegram Group Join Now
Share This Article